ಪುಟಗಳು

ಶುಕ್ರವಾರ, ಜನವರಿ 10, 2025

ನೀತಿನ್ ನೀಲಕಂಠೆ

ಉದಯೋನ್ಮುಖ ಯುವ ಬರಹಗಾರಾದ ನೀತಿನ್ ನೀಲಕಂಠೆಯವರು ಬೀದರ ಜಿಲ್ಲೆ ಬಸವಕಲ್ಯಾಣದ ಶಿವರಾಜ ನೀಲಕಂಠೆ ಮತ್ತು ಸೋನಾಲಿ ಎಂಬ ದಂಪತಿಗಳಿಗೆ ದಿನಾಂಕ ೨೬-೩-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಬಿ.ಇಡಿ.ಪದವಿ ಪಡೆದು ಮುರಾರ್ಜಿ ದೇಶಾಯಿ ವಸತಿ ಶಾಲಾ ಶಿಕ್ಷಕರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೮ರಲ್ಲಿ `ಕೂಲಿಂಗ್ ಗ್ಲಾಸ್ ಕನಸ್ಸುಗಳು' ೨೦೨೦ರಲ್ಲಿ `ದಿಲ್ ಕಾ ದುಕಾನ' (ಕವನ ಸಂಕಲನಗಳು) ಪ್ರಕಟಿಸಿದ್ದಾರೆ. ಮತ್ತು `ಕಾವ್ಯ ಮಿತ್ರ ಪ್ರಕಾಶನದಿಂದ ರಾಜ್ಯದ ವಿವಿಧ ಲೇಖಕರ ೧೫ಕೃತಿಗಳು ಪ್ರಕಟಿಸಿದ್ದಾರೆ. ೨೦೧೮ರಲ್ಲಿ ಬೆಂಗಳೂರಿನ ಕವಿ ವೃಕ್ಷ ಬಗಳದಿಂದ ಇವರ ವಿಮರ್ಶಾ ಲೇಖನಕ್ಕೆ ಗೌರವ ಸಮ್ಮಾನ, `ಪ್ರೇತಾತ್ಮದ ಮನೆಯಲ್ಲಿ' ಪುಸ್ತಕಕ್ಕೆ `ಉತ್ತಮ ಪ್ರಕಾಶಕನೆಂಬ ಪ್ರಶಸ್ತಿ, ಕವಿವೃಕ್ಷ ಬಳಗಳವು ನೀಡಿದೆ. ಮತ್ತು ಬಸವಕಲ್ಯಾಣ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿರುವ ಇವರು ಜಿಲ್ಲೆಯ ವಿವಿಧ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಬೆಳಕು ಸಂಸ್ಥೆಯು ತಮ್ಮ `ತ್ರಿವಳಿ’ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕಾವ್ಯಮಿತ್ರ ಪ್ರಕಾಶನಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯು ನೀಡಿ ಗೌರವಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ