ಕವಯತ್ರಿಯಾದ ವಿದ್ಯಾಶೀತಲ ಇವರು ಬೀದರದ ಅನಂತಾಚಾರ್ಯ ಮತ್ತು ಮಥುರಾಬಾಯಿ ದಂಪತಿಗಳಿಗೆ ದಿನಾಂಕ ೨೪-೭-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಗೃಹಿಣಿಯಾಗಿದ್ದುಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, ೧೯೮೭ರಲ್ಲಿ `ಜೀವನ ರಸ, ೧೯೯೨ರಲ್ಲಿ `ಅಧೂರಾ ಸಫರ, ೧೯೯೬ರಲ್ಲಿ `ನಿಶಾನ ಯಾದೊಂಕೆ, ೨೦೦೧ರಲ್ಲಿ `ಪ್ರೇರಣಾ ಕೆ ಕಣ' ಎಂಬ ಕೃತಿಗಳು ರಚಿಸಿದ್ದಾರೆ. ಇವರಿಗೆ ಕಲಬುರಗಿ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ