ಶುಕ್ರವಾರ, ಜನವರಿ 10, 2025
ಲಕ್ಷ್ಮೀಕಾಂತ ಸಿ. ಪಂಚಾಳ
ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪತ್ರಿಕೆಯ ಕುರಿತು ಸ್ಪರ್ಧಾತ್ಮಕವಾಗಿ ಕೆಲ ಕೃತಿಗಳು ಪ್ರಕಟಿಸಿದ ಲೇಖಕರೆಂದರೆ ಲಕ್ಷ್ಮೀಕಾಂತ ಸಿ. ಪಂಚಾಳ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯಳವಂತಗಿ ಗ್ರಾಮದ ಚಂದ್ರಕಾAತ ಪಂಚಾಳ ಮತ್ತು ಸರಸ್ವತಿ ಪಂಚಾಳ ದಂಪತಿಗಳಿಗೆ ದಿನಾಂಕ ೧೬-೬-೧೯೮೪ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ, ಪ.ಪೂ,ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಬೀದರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಭಾಷೆ ಮತ್ತು ವ್ಯಾಕರಣ, ಛಂದಸ್ಸುಗಳಲ್ಲಿ ಪ್ರಾವೀಣ್ಯತೆ ಹೊಂದಿದ ಇವರು ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಅವರೊಂದಿಗೆ ಸೇರಿ `ಸರಳ ಛಂದಸ್ಸು' `ಕನ್ನಡ ಸಾಹಿತ್ಯ ಸ್ಪರ್ಧಾ ಕೈಪಿಡಿ' `ಕಡ್ಡಾಯ ಕನ್ನಡ' `ಕನ್ನಡ ಕೈ ದೀವಿಗೆ' `ಕನ್ನಡ ಕೈ ಗನ್ನಡಿ' ಎಂಬ ಸಂಪಾದಿತ ಕೃತಿಗಳು ಮತ್ತು `ಸಾಹಿತ್ಯ ದೀಪ್ತಿ’ ಎಂಬ ವಿಮರ್ಶಾ ಲೇಖನಗಳ ಕೃತಿಯು ಹೊರತಂದಿದ್ದಾರೆ. ಇವರ ಕತೆ,ಕವನ,ಲೇಖನ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೯ರಲ್ಲಿ ಯುವಜನೋತ್ಸವ ಬಹುಮಾನವು ಲಭಿಸಿದೆ.
ಮೇನಕಾ ಪಾಟೀಲ್
ಉದಯೋನ್ಮುಖ ಯುವ ಬರಹಗಾರ್ತಿಯಾದ ಮೇನಕಾ ಪಾಟೀಲ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ದಿ.ಶರಣಪ್ಪ ನಂದಿ ಮತ್ತು ಜೈ ಶ್ರೀ ದಂಪತಿಗಳಿಗೆ ದಿನಾಂಕ ೧೮-೮-೧೯೮೫ರಲ್ಲಿ ಜನಿಸಿದ್ದಾರೆ. ಆಂಗ್ಲ ಮಾಧ್ಯಮದ ಪಿ.ಯು.ಸಿ (ವಿಜ್ಞಾನ)ವರೆಗೆ ಅಧ್ಯಯನ ಮಾಡಿ, ಪತ್ರಿಕೋದ್ಯಮ ಡಿಪ್ಲೊಮಾ ಪದವಿ ಪಡೆದು ಕೆಲ ವರ್ಷ ಮಂಗಳೂರಿನ `ಸ್ತ್ರೀ ಶಕ್ತಿ' ಮಾಸ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೂ ತನ್ನ ತಂದೆಯ ಡೈರಿಯಿಂದ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ಇವರು ೨೦೧೮ರಲ್ಲಿ `ಬಸವ ರಕ್ಷಾ' (ಕವನ ಸಂಕಲನ) ೨೦೧೯ರಲ್ಲಿ ಹುಲಸೂರು ಶ್ರೀಗಳ ಕುರಿತು `ಒಂದು ಜೀವನ ಚರಿತ್ರೆ' ಎಂಬ ಕೃತಿಯು ಪ್ರಕಟಿಸಿದ್ದಾರೆ. ಮತ್ತು ಹಲವಾರು ಕವನ,ಲೇಖನ, ಹನಿಗವನಗಳು ಬರೆದಿದ್ದರಿಂದ `ಸ್ತ್ರೀ ಶಕ್ತಿ' ಪ್ರಜಾವಾಣಿ, ಉದಯವಾಣಿ, ವಿಜಯವಾಣಿ ಮತ್ತು ಬಸವ ಟಿವಿ, ಮೊದಲಾದವುಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ಬೀದರದ ಕೆಲ ಕನ್ನಡ ಪರ ಸಾಹಿತ್ಯ ಸಂಘಟನೆಯವರು ಸತ್ಕರಿ ಗೌರವಿಸಿದ್ದಾರೆ. ಮತ್ತು ಇವರು ಬೀದರದ ಜಿಲ್ಲಾ ಮಹಿಳಾ ಕಸಾಪ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ