ಶುಕ್ರವಾರ, ಜನವರಿ 10, 2025
ಡಾ.ರವೀಂದ್ರನಾಥ ನಾರಾಯಣಪುರ
ಸಾಹಿತಿಗಳಾದ ಡಾ.ರವೀಂದ್ರನಾಥ ನಾರಾಯಣಪುರ ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರದ ಗುರಪ್ಪ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧೫-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ವಿ.ಎಸ್.ಸಿ, ಎಂ.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದ ಇವರು ೧೯೯೩ರಲ್ಲಿ ಬಸವಕಲ್ಯಾಣದ ಪಶುಪಾಲನ ಇಲಾಖೆಯ ಪಶುವೈಧ್ಯಾಧಿಕಾರಿಯಾಗಿ ಸೇವೆಗೆ ಸೇರಿ ಕೆಲವರ್ಷಗಳ ನಂತರ ಈಗ ಪ್ರಭಾರಿ ಸಹಾಯಕ ನಿರ್ದೇಶಕರಾಗಿ ಹುಮನಾಬಾದಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿರುವ ಇವರು ೨೦೧೦ರಲ್ಲಿ ಸಾಹಿತಿ ಓಂ ಪ್ರಕಾಶ ದಡ್ಡೆಯವರ ಕುರಿತು `ಗೀತೋಪಾಸಕ' ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ೧೯೯೫ರಲ್ಲಿ ಇವರು ಉತ್ತರ ಪ್ರದೇಶದಲ್ಲಿ ಐವಿಆರ್ವಿ ಕನ್ನಡ ಸಂಘವು ಕಟ್ಟಿ ಅಲ್ಲಿಯ ಕನ್ನಡಿಗರಿಗೆ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಮತ್ತು ವೈದ್ಯರಾಗಿ ಸಾಹಿತ್ಯ ಸೇವೆಯನ್ನು ಮಾಡಿರುವುದರಿಂದ ೨೦೧೩ರಲ್ಲಿ ಬೆಂಗಳೂರಿನ ಹೆಗಡೆ ಕಲ್ಚರಲ್ ಆ್ಯಂಡ್ ಸೋಶಿಯಲ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ೨೦೧೯ರಲ್ಲಿ ಬಸವಕಲ್ಯಾಣ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನರತ್ನ’ ಪ್ರಶಸ್ತಿ, ಸುರಪುರ ತಾಲೂಕಿನ ತಿಂಥಣಿಯಿAದ ಪ್ರಕಟವಾಗುವ ಕನಕ, ಕನಕಲೋಕ, ಕನಕಸುಧಾ ಎಂಬ ಪತ್ರಿಕೆಗಳಿಗೆ ಹವ್ಯಾಸಿ ವರದಿಗಾರರಾಗಿ ಸೇವೆ ಸಲ್ಲಿಸಿದರಿಂದ ಆ ಪತ್ರಿಕಾ ಸಮೂಹ ಸಂಸ್ಥೆಯಿAದ ಸತ್ಕರಿಸಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ