ಪುಟಗಳು

ಭಾನುವಾರ, ಜನವರಿ 12, 2025

ಕುಸುಮಾ ಹತ್ಯಾಳ

ಕವಯತ್ರಿ ಕುಸುಮಾ ಹತ್ಯಾಳ ರವರು ಕಲಬುರಗಿಯ ಸಿದ್ದಣ್ಣ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೨-೭-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಎಂ.ಎ. ಕನ್ನಡ. ಎಂ.ಎ ಇತಿಹಾಸ ಮತ್ತು ಎಂ.ಇಡಿ ಪದವಿದರರಾಧ ಇವರು ಬೀದರದ ಮಂಗಲಪೇಟೆಯ ಭೀಮಣ್ಣಾನವರ ಧರ್ಮ ಪತ್ನಿಯಾಗಿದ್ದು, ಖಾಸಗಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾದ ಇವರು ಇತ್ತೀಚಿನ ದಿನಗಳಲ್ಲಿ ಕವನ, ಲೇಖನ, ಗಜಲ್, ಹಾಯ್ಕುಗಳ ರಚನೆಯಲ್ಲಿ ತೊಡಗಿ `ಅಂತರAಗದ ಹಾಯ್ಕುಗಳು' ಮತ್ತು `ಮೌನ ಮೃದಂಗ' ಎಂಬ ಕೃತಿಗಳು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ಸಾಹಿತ್ಯ ಸಂಪದ ನೆನಪಿನ ಸ್ಪರ್ಧೆಯಲ್ಲಿ ಅತ್ಯುತ್ತಮ ಲೇಖನ ಪ್ರಶಸ್ತಿ, ಕೊಡಗಿನ ಗೆಳತಿಯರ ಬೆಳದಿಂಗಳ ನಕ್ಷತ್ರಗಳು ವತಿಯಿಂದ ಜೀವನದಲ್ಲಿ ಅಪ್ಪ ಪಾತ್ರ ಎಂಬ ಲೇಖನಕ್ಕೆ ಅತ್ಯುತ್ತಮ ಪ್ರಶಸ್ತಿ, ಸಾಹಿತ್ಯ ಕುಸುಮ ವೇದಿಕೆಯಿಂದ ಕನ್ನಡ ಕಲಾ ಕುಸುಮ ಪ್ರಶಸ್ತಿ, ಮತ್ತು ಗಣಕರಂಗ ಪ್ರಶಸ್ತಿ, ಹಾಗೂ ಸಾಂಸ್ಕೃತಿಕ ಸಾರಥಿ ಪ್ರಶಸ್ತಿ, ಎಂಬ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ