ಭಾನುವಾರ, ಜನವರಿ 12, 2025
ಓಂಪ್ರಕಾಶ ದಡ್ಡೆ
ಸಾಹಿತಿ ಓಂಪ್ರಕಾಶ ದಡ್ಡೆಯವರು ಬೀದರ ತಾಲ್ಲೂಕಿನ ಯರನಳ್ಳಿಯ ವೀರಶೇಟ್ಟಿ ಹಾಗೂ ಸಂಗಮ್ಮ ಎಂಬ ದಂಪತಿಗಳಿಗೆ ೨೦-೧೨-೧೯೭೦ರಲ್ಲಿ ಜನಿಸಿದ್ದಾರೆ. ಎಂ ಎ. ಸ್ನಾತಕೊತ್ತರ ಪದವಿಧರಾದ ಇವರು ೧೯೯೭ರಿಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಹೆಜ್ಜೆ‘ (ಕವನ ಸಂಕಲನ) `ಮಗು ನೀ ಜ್ಞಾನಿಯಾಗು', `ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ', `ಮಕ್ಕಳಿಗಾಗಿ ನಾವು' (ಮಕ್ಕಳ ಕೃತಿಗಳು) `ಬೇಮಳಖೇಡ ಇತಿಹಾಸ' (ಐತಿಹಾಸಿಕ) `ವೈಜ್ಞಾನಿಕ ದೃಷ್ಟಿಯಲ್ಲಿ ವಿಭೂತಿ' (ವೈಚಾರಿಕ) ೨೦೧೫ರಲ್ಲಿ `ನಾ ಕಂಡ ಮಥುರಾ' (ಪ್ರವಾಸ ಕಥನ) `ಕವಿಗಳು ಕಂಡ ಬಸವಣ್ಣ’ (ಸಂಪಾದಿತ) ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೪ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿಯು ಲಭೀಸಿದೆ. ಮತ್ತು ಇವರು ಪಿಯು ಇತಿಹಾಸ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಇಲಾಖೆಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ, ವಿಭಾಗ ಮಟ್ಟದ ಸಂಯೋಜಕರಾಗಿ ಸೇವೆ ಸಲ್ಲಿದ್ದಾರೆ. ೧೯೯೦ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು .೧೯೯೬ರಲ್ಲಿ ಹಾಸನ ೨೦೧೮ ರಲ್ಲಿ ಧಾರವಾಡಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ೨೦೧೬ರಲ್ಲಿ ಡಿ.ಡಿ. ಚಂದನ ವಾಹಿನಿಯ `ಬೆಳಗು' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಇವರು ೨೦೦೨ರಲ್ಲಿ ದೂರದರ್ಶನ ಏರ್ಪಡಿಸಿದ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಅಷ್ಟೇಯಲ್ಲದೆ ಇವರ ಉಪನ್ಯಾಸಗಳು ಕಲಬುರಗಿ ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಇವರ ಕುರಿತು ಡಾ.ರವೀಂದ್ರನಾಥ ನಾರಾಯಣಪುರ ಅವರು ೨೦೧೦ರಲ್ಲಿ `ಗೀತೊಪಾಸಕ ಓಂಪ್ರಕಾಶ ದಡ್ಡೆ' ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ