ಪುಟಗಳು

ಭಾನುವಾರ, ಜನವರಿ 12, 2025

ಕಸ್ತೂರಿ ಎಸ್.ಪಟಪಳ್ಳಿ

ಕವಯತ್ರಿ ಕಸ್ತೂರಿ ಎಸ್.ಪಟಪಳ್ಳಿ. ಇವರು ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಬಸವರಾಜ ಮತ್ತು ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ. ಎಂ.ಫೀಲ್ .ಪದವಿಧರರಾದ ಇವರು ಬೀದರ ತಾಲೂಕಿನ ಬೆಳುರ ಗ್ರಾಮದ ಶಿವಕುಮಾರ್ ಪಟಪಳ್ಳಿಯವರ ಧರ್ಮ ಪತ್ನಿಯಾಗಿರುವ ಇವರು ಬೀದರ ತಾಲೂಕಿನಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು `ತಂತು ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಪುಸ್ತಕವು ಪ್ರಕಟಿಸಿದ್ದಾರೆ. ಇದು ಅವರ ಎಂ.ಫೀಲ್ .ಅಧ್ಯಯನದ ಕೃತಿಯಾಗಿದ್ದು, ಕಸಾಪ ಅದನ್ನು ೨೦೧೮ರಲ್ಲಿ ಪ್ರಕಟಿಸಿದೆ. ಇವರ ಲೇಖನ, ಕವನಗಳು ಭಾಲ್ಕಿಯ `ಶಾಂತಿ ಕಿರಣ' ಮಾಸಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಕೆಲ ಭಾವ ಗೀತೆಗಳು ಧ್ವನಿ ಸುರುಳಿಯಾಗಿಯು ಜನಪ್ರಿಯವಾಗಿವೆ. ಇವರಿಗೆ ೨೦೧೦ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ೨೦೧೯ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೀದರದ ರೋಟರಿ ಕ್ಲಬ್‌ಯಿಂz ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಕಾವ್ಯ ರತ್ನ, ಪ್ರಶಸ್ತಿ, ಕರ್ನಾಟಕ ಜನಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿAದ ಡಾ.ಅಂಬೇಡ್ಕರ್ ಪ್ರಶಸ್ತಿಯು ಪಡೆದಿದ್ದಾರೆ. ಇವರು ಬೀದರ ಜಿಲ್ಲಾ ಮಹಿಳಾ ಕಸಾಪ ಕಾರ್ಯಕಾರಿ ಸದಸ್ಯರಾಗಿ, ಜಿಲ್ಲಾ ವಿಜ್ಞಾನ ಪರಿಷತ್ತಿನ ಮಹಿಳಾ ನಿರ್ದೇಶಕರಾಗಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾಗಿ, ಅಖಿಲ ಭಾರತ ವಚನ ಸಾಹಿತ್ಯದ ಕೇಂದ್ರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ