ಶನಿವಾರ, ಜನವರಿ 11, 2025
ಡಾ.ಮಲ್ಲಿಕಾರ್ಜುನ ಅಮ್ಣೆ
ಸಾಹಿತಿ ಡಾ.ಮಲ್ಲಿಕಾರ್ಜುನ ಅಮ್ಣೆ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಸೋನಕೇರಿ ಗ್ರಾಮದ ಜೆಟ್ಟೆಪ್ಪ ಮತ್ತು ದ್ರೋಪದಿಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಎA.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಕೆಲ ವರ್ಷ ಕಲಬುರಗಿಯ ಖಾಸಗಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಂತರ ೨೦೦೯ರಿಂದ ಬಸವಕಲ್ಯಾಣ ತಾಲೂಕಿನ ಮಂಠಾಳ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರಿ ಸದ್ಯ ಆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೦೨ರಲ್ಲಿ `ಮೂರು ಸಮನಾಂತರ ನಾಟಕಗಳು’ (ನಾಟಕ) ೧೯೯೭ರಲ್ಲಿ `ಕೆಂಪು ಸೂರ್ಯ ಮತ್ತು ಇತರ ಕವನಗಳು’ (ಕವನಸಂಕಲನ) ೨೦೦೬ರಲ್ಲಿ `ನಾನು-ನೀನು' (ಹನಿ ಕವನಸಂಕಲನ) ೨೦೦೮ರಲ್ಲಿ `ದಲಿತ ತತ್ವ ಪದಕಾರ ಕಾಶಿನಾಥ ಗವಾಯಿ' (ವ್ಯಕ್ತಿ ಚಿತ್ರಣ) ೨೦೧೧ರಲ್ಲಿ `ಆಧುನಿಕ ಸಾಹಿತ್ಯದಲ್ಲಿ ಬಸವಣ್ಣ' (ಶರಣ ಸಾಹಿತ್ಯ) ೨೦೦೯ರಲ್ಲಿ `ದಲಿತ ಸಿರಿ' (ಸಂಪಾದನೆ) ೨೦೧೩ರಲ್ಲಿ `ಬೋಧಿಯ ಬೆಳಕಿನಲಿ’್ಲ (ಪ್ರವಾಸ ಕಥನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ೨೦೦೧ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ `ಬರ' ಕತೆಗೆ ಉತ್ತಮ ಕಥಾ ಪ್ರಶಸ್ತಿ, ಹುಮನಾಬಾದ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪ ಪುಸ್ತಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರ ಪ್ರವಾಸ ಕಥನವು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಕಾಂ.ವಿದ್ಯಾರ್ಥಿಗಳಿಗೆ ನಾಲ್ಕನೇ ಸೆಮಿಸ್ಟರ್ ಪಠ್ಯವಾಗಿ ಪ್ರಕಟವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ