ಪುಟಗಳು

ಶನಿವಾರ, ಜನವರಿ 11, 2025

ಪುಷ್ಪಾ ಜಿ.ಕನಕಾ

ಕವಯತ್ರಿಯಾದ ಪುಷ್ಪಾ ಜಿ.ಕನಕಾ. ರವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಸಿದ್ದಪ್ಪಾ ಭುನ್ನಾ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೫-೭-೧೯೬೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಬೀದರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಣದೂರವಾಡಿಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಬಹುದಿನಗಳ ನಂತರ ಅಂದರೆ ೨೦೦೮ರಲ್ಲಿ `ವಚನ ಸುಮ' (ಆಧುನಿಕ ವಚನ) ೨೦೧೩ರಲ್ಲಿ `ಪುಟ್ಟಾಣಿ ಬಯಕೆ’ (ಶಿಶು ಗೀತೆಗಳು) ೨೦೧೭ರಲ್ಲಿ `ಹನಿ ಮಂಜರಿ’ (ಚುಟುಕು ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳ ವತಿಯಿಂದ `ಚುಟುಕು ಜ್ಯೋತಿ', `ಚುಟುಕು ರಶ್ಮಿ', `ಸಾಹಿತ್ಯ ರತ್ನ’ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ