ಶನಿವಾರ, ಜನವರಿ 11, 2025
ಸಾಧನಾ ರಂಜೋಳಕರ್
ಹೆಸರಿಗೆ ತಕ್ಕಂತೆ ಕಾದಂಬರಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರೆಂದರೆ ಸಾಧನಾ ರಂಜೋಳಕರ್. ಇವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನೋಳಿ ಗ್ರಾಮದ ಶಾಮರಾವ್ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೨೪-೪-೧೯೫೯ರಲ್ಲಿ ಜನಿಸಿದ್ದಾರೆ. ಇವರು ಹುಮನಾಬಾದ ತಾಲೂಕಿನ ಖೇಣಿ ರಂಜೋಳ ಗ್ರಾಮದ ಅನಂತರಾವ ರಂಜೋಳಕರ್ ರವರ ಧರ್ಮ ಪತ್ನಿಯಾಗಿದ್ದು, ಗೃಹಿಣಿಯಾಗಿದ್ದುಕೊಂಡೆ ಕೆಲ ಕಾದಂಬರಿಗಳು ರಚಿಸಿ ೨೦ವರ್ಷಗಳ ನಂತರ ಪುಸ್ತಕ ಪ್ರಕಟಿಸಿದ್ದಾರೆ. `ಕಥೆಯೊಳಗೊಂದು', `ಮುಗ್ದ - ಬೆಸುಗೆ', `ಸ್ವಪ್ನ-ಸಾಗರ', `ಲೇಖನಿ', `ಹೂವು-ದುಂಬಿ' `ಸಿಡಿಲು' (ಕಾದಂಬರಿಗಳು) `ವಾಸ್ತವ' (ಕಥಾಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಹುಲಸೂರು ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದ `ಉರಿಲಿಂಗ ಪೆದ್ದಿ ಪ್ರಶಸ್ತಿ', ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾದಂಬರಿ ರತ್ನ ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಮತ್ತು ಮನ್ನಳಿಯಲ್ಲಿ ನಡೆದ ೬ನೇ ಬೀದರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಚರಾಗಿ ಆಯ್ಕೆ ಮಾಡಿ ಇವರಿಗೆ ಗೌರವಿಸಲಾಗಿದೆ. ಇವರ ಕತೆ, ಕವನ, ಲೇಖನ, ಬರಹಗಳು ತುಷಾರ ಮಲ್ಲಿಗೆ ಕರ್ಮವೀರ ಮೊದಲಾದ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಮತ್ತು ಬಾನುಲಿಯಿಂದಲೂ ಇವರದೊಂದು ಕಾದಂಬರಿ ಪ್ರಸಾರವಾಗಿ ಜನಮೆಚ್ಚುಗೆ ಗಳಿಸಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ