ಶನಿವಾರ, ಜನವರಿ 11, 2025
ಶಿವಸ್ವಾಮಿ ಚಿನಕೇರಾ
ಸಾಹಿತಿ ಶಿವಸ್ವಾಮಿ ಚೀನಕೇರಾ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚೀನಕೇರಾ ಗ್ರಾಮದ ಲಿಂಗಪ್ಪ ಮತ್ತು ರೇವಮ್ಮಾ ದಂಪತಿಗಳಿಗೆ ದಿನಾಂಕ ೨೨-೦೫-೧೯೬೭ರಲ್ಲಿ ಜನಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ವಿದ್ವತ್ ಗ್ರೇಡ್ ಪದವಿ ಪಡೆದು ಸರಕಾರಿ ಪ್ರೌಢ ಶಾಲೆ ಮನ್ನಾಏಖೇಳಿಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ದೃಷ್ಟಿದೋಷ ಇರುವುದರಿಂದ ಓದುವುದು, ಬರೆಯುವದು ಕಷ್ಟವಾಗಿದೆ. ಆದ್ದರಿಂದ ಅವರು ತಮ್ಮ ಪತ್ನಿಯ ಸಹಾಯದಿಂದ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ. ಇವರು `ಲಿಂಗದೇವನ ವಚನ ದೀಪ್ತಿ', `ವಚನಾಂಕುರ', `ವಚನ ಸಂಜೀವಿನಿ' (ವಚನ ಸಂಕಲನಗಳು) `ಹುಲಸೂರು ಶ್ರೀಗಂಧ' (ಭಕ್ತಿ ಗೀತೆಗಳು) `ಕನ್ನಡ ಸೌರಭ' (ನಾಡಗೀತೆಗಳು) `ಪಂಚಚಾರ ಪ್ರಭೆ’ (ವಚನಗಳ ವಿಶ್ಲೇಷಣೆ) `ಕಣಗಿಲು ಬಾವಿ' `ಮುಂಬೆಳಕು' (ಕಥಾಸಂಕಲನಗಳು) `ಸೀಮೋಲ್ಲಂಘನೆ' (ವೈಚಾರಿಕ) ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರು ಸಂಗೀತ ಕಲಾವಿದರು ಆಗಿ ಸಾಹಿತ್ಯದಲ್ಲಿ ಮಾಡಿದ ಕಾರ್ಯ ಸಾಧನೆಗೆ ಚಿತ್ರದುರ್ಗದ ಮುರುಘರಾಜೇಂದ್ರ ಶ್ರೀಗಳು ಜಿ.ಎಸ್ ಶಿವರುದ್ರಪ್ಪನವರಿಂದ ಗೌರವಿಸಿದ್ದಾರೆ. ಮತ್ತು ಹುಲಸೂರಿನಿಂದ ಪ್ರವಚನ ರತ್ನ, ಅಂಬಿಗರ ಚೌಡಯ್ಯ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರಿಗೆ ೨೦೧೪ರಲ್ಲಿ ಹುಮನಾಬಾದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ