ಶನಿವಾರ, ಜನವರಿ 11, 2025
ಶೋಭಾ ಔರಾದೆ
ಕವಯತ್ರಿ ಶೋಭಾ ಔರಾದೆ ಯವರು ಬೀದರ ಜಿಲ್ಲೆ ಹುಮನಾಬಾದಿನ ರಾಮಣ್ಣ ಮತ್ತು ಪುತಳಾಬಾಯಿ ದಂಪತಿಗಳಿಗೆ ದಿನಾಂಕ ೧-೮-೧೯೬೫ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ೧೯೯೭ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ೨೦೧೩ರಲ್ಲಿ `ಬಯಲು ಬಯಲನ್ನೆ ಬಿತ್ತಿ’ (ಅಧ್ಯಾತ್ಮಿಕ) ೨೦೧೮ರಲ್ಲಿ `ವಚನ ಸಿರಿ’, `ವಚನ ವೀಳ್ಯೆ’ (ವಚನ ಸಂಕಲನಗಳು) ೨೦೧೭ರಲ್ಲಿ `ಸೊಲ್ಲೆತ್ತಿ ಹಾಡೇನ ಮಹಾಂತನ’ (ತ್ರಿಪದಿ) `ಹಳೆ ಹಾಡು ಹೊಸ ಭಾವ’ (ಜಾನಪದ) ೨೦೧೮ರಲ್ಲಿ `ವೀರ ಗಣಾಚಾರಿ ಮಡಿವಾಳ ಮಾಚಿದೇವರು’ (ಚರಿತ್ರೆ) ೨೦೧೯ರಲ್ಲಿ `ನಾನು ದೇವರಲ್ವೇನಮ್ಮಾ’ (ಮಕ್ಕಳ ಕವನಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಿಂದಲೂ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೧೬ರಲ್ಲಿ ಬಸವಕಲ್ಯಾಣ ಅನುಭವ ಮಂಟಪದಿAದ ಶರಣೆ ಗಂಗಾAಭಿಕೆ ಪ್ರಶಸ್ತಿ, ೨೦೧೭ರಲ್ಲಿ ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದಿAದ ಬಸವಗುರು ಕಾರುಣ್ಯ ಪ್ರಶಸ್ತಿ, ೨೦೧೮ರಲ್ಲಿ ಹುಮನಾಬಾದ ತಾಲೂಕು ರಾಜ್ಯೋತ್ಸವ, ೨೦೧೯ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದ್ದಾರೆ. ಮತ್ತು ಹುಮನಾಬಾದ ತಾಲೂಕಿನ ಕದಳಿ ವೇದಿಕೆ ಮತ್ತು ನೀಲಮ್ಮನ ಬಳಗದ ಅಧ್ಯಕ್ಷರಾಗಿ, ಬಸವಕಲ್ಯಾಣ ಪ್ರಾಥಮಿಕ ಶಾಲಾ ಶಿಕ್ಷಕ ನೌಕರ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ