ಭಾನುವಾರ, ಜನವರಿ 12, 2025
ಎಂ.ಜಯವಂತ ಜ್ಯೋತಿ
ಹೊರನಾಡ ಕನ್ನಡ ಸಾಹಿತಿ ಎಂ.ಜಯವಂತ ಜ್ಯೋತಿ. ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ (ಹೆಚ್) ಗ್ರಾಮದ ಮಾಣಿಕರಾವ ಮತ್ತು ಸುಂದರಮ್ಮಾ ದಂಪತಿಗಳಿಗೆ ದಿನಾಂಕ ೧-೧೦-೧೯೬೪ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಪದವಿಧರರಾದ ಇವರು ಕಮಲನಗರ ಮತ್ತು ಬೀದರನಲ್ಲಿ ಕೆಲ ವರ್ಷ ವಿಲೇಜ್ ಮೆಡಿಕಲ್ ಸರ್ವಿಸ್ ನಲ್ಲಿ ಅಕೌಂಟೆನ್ಸಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಹೊಂದಿದ ಇವರು ಆ ಭಾಷೆಗಳಲ್ಲಿ ಕವನ, ಲೇಖನ, ನಾಟಕ, ಬೀದಿ ನಾಟಕಗಳನ್ನು ಬರೆದಿದ್ದಾರೆ. ಮತ್ತು ಸಂಗೀತ ಪ್ರೀಯರಾಗಿ ಮುಂಬಯಿಯ ಸಿನಿಮಾ ಗಾಯಕರೊಂದಿಗೆ ಒಡನಾಟ ಬೆಳೆಸಿಕೊಂಡು, ಹಾಡುಗಳನ್ನು ಹಾಡುವುದು, ಭಜನೆ ಮಾಡುವುದರೊಂದಿಗೆ ಸಾಹಿತ್ಯ ರಚಿಸಿ ೧೯೯೬ರಲ್ಲಿ `ಬಡವರ ಬಂಧು ಸೈನಿಕಾರ' (ವ್ಯಕ್ತಿ ಚಿತ್ರಣ) `ದಾರಿ ದೀಪ’ (ಕವನಸಂಕಲನ) `ಅರ್ಟಿಕಲ್ ಟು ನ್ಯೂಜ್ ಲೇಟರ್’ (ಇಂಗ್ಲೀಷ) ಎಂಬ ಕೃತಿಗಳು ಹೊರತಂದಿದ್ದಾರೆ. ಇವರ ಬರಹಗಳು ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಕೆಲ ಸ್ಮರಣ ಸಂಚಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ. ಇವರು ಸುಮಾರು ೨೦ ವರ್ಷಗಳಿಂದ ಮುಂಬಯಿಯ ಮೇಥೊಡಿಸ್ಟ ಚರ್ಚಿನಿಂದ ಪಾಸ್ಟರಾಗಿ ಕ್ರೈಸ್ತ ಧರ್ಮದ ಕುರಿತು ಪ್ರಚಾರದಲ್ಲಿದ್ದುಕೊಂಡು ಮುಂಬಯಿ ಮಹಾನಗರಿಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ