ಭಾನುವಾರ, ಜನವರಿ 12, 2025
ಡಾ.ಗುರುಲಿಂಗಪ್ಪ ಧಬಾಲೆ
ಗಡಿ ಕನ್ನಡಿಗರಾಗಿ ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿದ ಲೇಖಕ ಡಾ.ಗುರುಲಿಂಗಪ್ಪ ಧಬಾಲೆ. ಇವರು ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ತೊಗಲೂರು ಗ್ರಾಮದ ಶೆಂಕರೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೨-೪-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫಿಲ್.ಪಿಎಚ್.ಡಿ.ಪದವಿಧರರಾದ ಇವರು ಮಹಾರಾಷ್ಟç ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆಯ ಸಿ.ಬಿ.ಖೇಡಗಿ ಬಸವೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ, `ಬೀದರ ಜಿಲ್ಲೆಯ ಅನುಭಾವಿ ಕವಿಗಳು, ಶರಣ ಅಂಬಿಗರ ಚೌಡಯ್ಯ, ಹುಲಸೂರು ಬಸವಕುಮಾರ ಶಿವಯೋಗಿ, ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು, ಗಡಿ ನಡಿಯ ಬೆಡಗು, ಶರಣ ಸೊಲ್ಲಾಪುರ, ಕಲ್ಯಾಣ ದೀಪ್ತಿ, ಶರಣ ಶ್ರಾವಣ, ಬಸವಯೋಗಿ, ಕನ್ನಡ ಮರಾಠಿ ಭಾಂಧವ್ಯ ಗಡಿ ಕನ್ನಡಿಗರ ಸಮಸ್ಯೆಗಳು, ಚನ್ನಬಸವ ಕಲ್ಯಾಣ, ವೀರಗಣಾಚಾರಿ ಅಂಬಿಗರ ಚೌಡಯ್ಯ, ಪಂಡಿತಾರಾಧ್ಯ ಚಾರಿತ್ರ ಸಂಗ್ರಹ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನದಲ್ಲಿ ಪ್ರಕಟ, ಪ್ರಸಾರವಾಗಿವೆ. ಮತ್ತು ಅಕ್ಕಲಕೋಟೆಯ ಪ್ರಜಾವಾಣಿ ಪತ್ರಿಕೆ ವರದಿಗಾರರಾಗಿ, ಮಹಾರಾಷ್ಟ್ರದ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಸಂಪಾದಕ, ಪ್ರಧಾನ ಸಂಪಾದಕರಾಗಿ, . ಕೊಲ್ಲಾಪುರ, ಮುಂಬೈ, ಸೊಲ್ಲಾಪುರ, ಗುಲಬರ್ಗಾ ವಿ.ವಿ, ಅಭ್ಯಾಸ ಮಂಡಳಿಯ ಸದಸ್ಯರಾಗಿ, ಸೊಲ್ಲಾಪುರ ವಿ.ವಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಗಡಿನಾಡು ಹೊರನಾಡು ಉಪಸಮಿತಿಯ ಸದಸ್ಯರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಸೊಲ್ಲಾಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ