ಭಾನುವಾರ, ಜನವರಿ 12, 2025
ಡಾ.ಧನರಾಜ ಧರಂಪುರ
ಸಾಹಿತಿ ಡಾ.ಧನರಾಜ ಧರಂಪುರ ರವರು ಬೀದರ ತಾಲೂಕಿನ ಧರಂಪುರ ಗ್ರಾಮದ ವೀರಶೇಟ್ಟಿ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೨-೫-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಎಲ್.ಎಲ್.ಬಿ. ಎಂ.ಎ.ಎA.ಫೀಲ್. ಪಿ.ಎಚ್.ಡಿ. ಪದವಿಧರರಾದ ಇವರು ೧೯೯೬ರಲ್ಲಿ ತೆಲಂಗಾಣದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಒಪ್ಪಂದದ ಮೇರೆಗೆ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ೧೨ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೪ರಲ್ಲಿ `ನಮ್ಮ ಶರಣರು’ ೨೦೧೪ರಲ್ಲಿ `ಶರಣ ಸಿರಿ’ ೨೦೧೫ರಲ್ಲಿ `ಅಮರ ದರ್ಪಣ’ ೨೦೧೬ರಲ್ಲಿ `ಸಾಹಿತ್ಯ ಶೋಧ’ ೨೦೧೭ರಲ್ಲಿ `ಮಡಿವಾಳ ಮಾಚಿ ದೇವನ ಜೀವನ ಮತ್ತು ಕೃತಿಗಳು ಒಂದು ಅಧ್ಯಯನ’ ಮತ್ತು ೨೦೧೯ರಲ್ಲಿ `ಸಕಲೇಶ ಮಾದರಸನ ಜೀವನ ಮತ್ತು ಕೃತಿಗಳು ಒಂದು ಅಧ್ಯಯನ’(ಸಂಶೋಧನೆ) ೨೦೧೮ರಲ್ಲಿ `ಹೈದರಾಬಾದ ಜಾನಪದ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ತೆಲುಗು ಭಾಷೆ, ಅಕ್ಷರ, ವ್ಯಾಕರಣ ಛಂದಸ್ಸು ಕಲಿತ ಇವರು ಆ ಭಾಷೆಯಲ್ಲಿ ೨೦೧೫ರಲ್ಲಿ `ಕನ್ನಡ ಮಡೆಳು ಪುರಾಣಂ ವಿಶ್ಲೇಷಣೆ’ ಮತ್ತು `ಮಾಚಯ್ಯನ ದೃಷ್ಟಿಲು ಆತ್ಮ ದೇವುಡು’ ಎಂಬ ಕೃತಿಗಳು ಪ್ರಕಟಿಸಿರುವುದು ವಿಶೇಷವಾಗಿದೆ. ಮತ್ತು ಇವರ ಲೇಖನ, ಬರಹಗಳು ಪ್ರಜಾವಾಣಿ, ಬಸವಪಥ, ಕ್ರಾಂತಿ ಭೂಮಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ದಲಿತ ಕವಿ ಡಾ.ಸಿದ್ದಲಿಂಗಯ್ಯ ಕನ್ನಡ ಮಾಧ್ಯಮ ಪ್ರಶಸ್ತಿ ನೀಡಿದರೆ, ಬೀದರದ ಕರ್ನಾಟಕ ಗಡಿ ಹೋರಾಟ ಸಮಿತಿಯಿಂದ ಗಡಿನಾಡು ಕನ್ನಡಿಗ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ಹೈದರಾಬಾದ ಆಕಾಶವಾಣಿಯಲ್ಲಿ ಇವರು ಕನ್ನಡ ಸಾಹಿತ್ಯಕ್ಕೆ ಸಂಬAಧ ಪಟ್ಟ ವಿಷಯಗಳ ಕುರಿತು ಚರ್ಚೆ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ