ಪುಟಗಳು

ಭಾನುವಾರ, ಜನವರಿ 12, 2025

ಡಾ.ರಮೇಶ ಮೂಲಗೆ

ಹೊರನಾಡ ಸಾಹಿತಿ ಡಾ.ರಮೇಶ ಮೂಲಗೆಯವರು. ಬೀದರ ತಾಲೂಕಿನ ಮಮದಾಪೂರ ಗ್ರಾಮದ ಹಣಮಂತಪ್ಪಾ ಮತ್ತು ತಾರಮ್ಮ ದಂಪತಿಗಳಿಗೆ ದಿನಾಂಕ ೧ ೬-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್.ಪಿ.ಎಚ್.ಡಿ ಪದವಿಧರರಾದ ಇವರು ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಉದಗಿರ ತಾಲೂಕಿನ ಉದಯಗಿರಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಹೊರನಾಡಿನಲ್ಲಿದ್ದುಕೊಂಡು ಕೆಲ ಸಾಹಿತ್ಯ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಸಿಡಿದ ಮುತ್ತುಗಳು', `ಬೀದರ ಜಿಲ್ಲೆಯ ವೀರಶೈವ ಮಠಗಳು', `ಹಳೆಂಬರ ಶ್ರೀ ವೀರಭದ್ರಪ್ಪಾ’, `ನಾ ಕಂಡ ಮನೆ', `ಮಾಣಿಕ್ಯ ದೀಪ್ತಿ', `ಬೀದರ ಜಿಲ್ಲೆಯ ಬಿಸುವ ಪದಗಳು', `ಕರುನಾಡ ಸಿರಿ', `ದಸ್ತಗಿರಿ ದೀಕ್ಷಾ ವಿಧಿ ವಿಧಾನ’, `ಲೇಸನ್ನೆ ಬಯಸಿದರು', `ಶಿವಬಿಂಬ', `ಲಲಿತಾರವಿಂದ', `ಬಾಗಿದ ತಲೆ ಮುಗಿದ ಕೈ', `ನಮ್ಮ ಶರಣರು', `ಬಸವ ಪರಿಶೋಧ', `ಗಡಿನಾಡ ಕನ್ನಡಿಗರು', `ಅಮರ ದರ್ಪಣ’, `ಸಮತಾ ನಾಯಕ ಬಸವಣ್ಣ', `ಹೊಸ ಬೆಳಕು', `ಸತ್ಯ ಹುಡುಕಿದಾಗ', `ನಡುಗನ್ನಡ ಕವಿ-ಕಾವ್ಯ'. ಇವು ಇವರ ಪ್ರಮುಖ ಕೃತಿಗಳಾಗಿವೆ. ಮಹಾರಾಷ್ಟ್ರ ಲಾತೂರ್ ಜಿಲ್ಲೆಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗಡಿನಾಡು ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ, ಮರಾಠವಾಡ ವಿಶ್ವವಿದ್ಯಾಲಯ ನಾಂದೇಡದ ಪಿ.ಎಚ್.ಡಿ ಮಾರ್ಗದರ್ಶಕರಾಗಿ, ಬೊರ್ಡ ಆಪ್ ನಾಂದೇಡ ಶಿವಾಜಿ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ `ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ೬ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಸಂವಾದಕರಾಗಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ