ಪುಟಗಳು

ಭಾನುವಾರ, ಜನವರಿ 12, 2025

ಸರ್ವಮಂಗಳಾ ಜಯಶೆಟ್ಟಿ

ವಿದೇಶದಲ್ಲಿ ನೆಲೆಸಿರುವ ಸಾಹಿತಿ ಸರ್ವಮಂಗಳಾ ಜಯಶೆಟ್ಟಿ. ರವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ್ರಖ್ಯಾತ ಅಗ್ರಗಣ್ಯ ಹಿರಿಯ ಸಾಹಿತಿ ಪ್ರೊ.ಭಾಲಚಂದ್ರ ಜಯಶೆಟ್ಟಿ ಮತ್ತು ಪುಷ್ಪಾ ದಂಪತಿಗಳಿಗೆ ದಿನಾಂಕ ೨೪-೧೨-೧೯೭೬ರಲ್ಲಿ ಜನಿಸಿದ್ದಾರೆ. ಸಾಫ್ಟವೇರ್ ಇಂಜಿನಿಯರಿAಗ್ ಪದವೀಧರರಾದ ಇವರು ಮುಂಬೈನಲ್ಲಿ ೧೧ ವರ್ಷ ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಮ್ಯಾನೆಜರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸುಮಾರು ೧೦ ವರ್ಷಗಳಿಂದ ಇಂಗ್ಲೆAಡಿನಲ್ಲಿ ವಾಸವಾಗಿರುವ ಇವರು ಅಲ್ಲಿಯ `ಮೈಂಡ್ ಹೆಲ್ತ ಚಾರಿಟೇಬಲ್' ಎಂಬ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿರುವ ಇವರು ಅವರ ನಾಟಕ, ಕತೆ,ಕವನ ಲೇಖನ, ಲಲಿತ ಪ್ರಬಂಧ, ಚರಿತ್ರೆ ,ಅನುವಾದ ಸಾಹಿತ್ಯವನ್ನು ಓದಿ ಬೆಳೆದವರು. ಅಷ್ಟೇಯಲ್ಲದೆ ಆ ತರಹದ ಸಾಹಿತ್ಯ ರಚಿಸುವಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿದ್ದಾರೆ. ಅವುಗಳೆಂದರೆ ೨೦೦೩ರಲ್ಲಿ `ಸಂಗಣಕ ಸಂಗಾತಿ' ಇದು ೨೦೧೩ರಲ್ಲಿ ದ್ವಿತೀಯ ಮುದ್ರಣ ಕಂಡಿದೆ. ಜನಸಾಮಾನ್ಯರಿಗೆ ಕಂಪ್ಯೂಟರ್ ಜ್ಞಾನ ಒದಗಿಸಲು ತುಂಬ ಸಹಕಾರಿಯಾದ ಈ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದೆ.. ಮತ್ತು ೨೦೦೪ರಲ್ಲಿ `ಝಾಂಸಿ ರಾಣಿ ಲಕ್ಷ್ಮೀಬಾಯಿ' ಎಂಬ ಪುಸ್ತಕ ಪ್ರಕಟಿಸಿದ್ದು, ಅದು ಕೂಡ ೨೦೦೮ರಲ್ಲಿ ದ್ವಿತೀಯ, ೨೦೧೮ರಲ್ಲಿ ತೃತೀಯ ಮುದ್ರಣವಾಗಿದೆ. ಹಾಗೆಯೇ ೨೦೦೮ರಲ್ಲಿ `ಮದರ ತೆರೆಸಾ' ಎಂಬ ಕೃತಿಯು ಪ್ರಕಟಿಸಿದ್ದು ,ಇದು ಕೂಡ ಅದೇ ವರ್ಷ ದ್ವಿತೀಯ ಮುದ್ರಣವು ಕಂಡಿದೆ. ಹಾಗೂ ೨೦೦೬ರಲ್ಲಿ `ಶಿರಡಿ ಸಾಯಿಬಾಬಾ' ಎಂಬ ಕೃತಿಯು ಪ್ರಕಟಿಸಿದ್ದು, ಈ ಕೃತಿಯು ೨೦೦೮ ಮತ್ತು ೨೦೦೯ ರಲ್ಲಿಮರು ಮುದ್ರಣವಾಗಿದೆ. ಇವರು ತಮ್ಮ ಬರಹಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ಬರೆದಿದ್ದು, ಅವು ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಅಷ್ಟೇಯಲ್ಲದೆ ಹಲವಾರು ಪ್ರಮುಖ ಕನ್ನಡ,ಮತ್ತು ಆಂಗ್ಲ ಭಾಷೆಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಸದ್ಯ ಇವರು ಇಂಗ್ಲೆAಡ್ ನಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ