ಪುಟಗಳು

ಭಾನುವಾರ, ಜನವರಿ 12, 2025

ಧರ್ಮೇಂದ್ರ ಪೂಜಾರಿ ಬಗ್ದೂರಿ

ಹೊರನಾಡಿನ ತೆಲಂಗಾಣ ಪ್ರದೇಶದಲ್ಲಿ `ಶೋಧವಾಣಿ' ಎಂಬ ಕನ್ನಡ ದಿನಪತ್ರಿಕೆಯ ಮೂಲಕ ಹೊರನಾಡ ಕನ್ನಡಿಗರರಾಗಿ ಪತ್ರಿಕೆಯ ಪ್ರಧಾನ ಸಂಪಾದರಾಗಿ ಲೇಖಕರಾಗಿ ಗುರುತಿಸಿಕೊಂಡವರೆAದರೆ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ಪಂಡಿತರಾವ ಮತ್ತು ದ್ರೌಪತಿ ಎಂಬ ದಂಪತಿಗಳಿಗೆ ದಿನಾಂಕ ೨೪-೬-೧೯೭೮ ಜನಿಸಿದ್ದಾರೆ. ಎಂ.ಎ. ಬಿ.ಇಡಿ.ಪದವಿ ಪಡೆದು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿರುವ ಇವರು ಪತ್ರಕರ್ತ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದ ತೆಲಂಗಾಣ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಅಧ್ಯಯನ ಮಾಡಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯದ ಕಡೆಗೆ ಆಸಕ್ತರಾಗಿ ಉತ್ತಮ ಬರಹಗಾರರು ಆಗಿದ್ದಾರೆ. ಮತ್ತು ಈಗಾಗಲೇ `ಜೀವನ ಒಂದು ಪಯಣ' ಎಂಬ ಕವನ ಸಂಕಲನ, `ತೆಲಂಗಾಣ ಕನ್ನಡ ಕಿರಣ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ೧೯೯೮ರಲ್ಲಿ ಬಸವಕಲ್ಯಾಣದ `ಬಹಿರಂಗ ಸುದ್ದಿ' ಎಂಬ ಪತ್ರಿಯಲ್ಲಿ ಅಕ್ಷರ ಮೊಳೆ ಜೋಡಿಸಲು ಸುದ್ದಿ ಮನೆ ಸೇರಿ ಇವರು ತಮ್ಮ ಪದವಿ ಶಿಕ್ಷಣ ಕಲಿಯುವುದರೊಂದಿಗೆ ಸ್ಥಳೀಯ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿ ನಂತರ 'ಶೋಧವಾಣಿ' ಪತ್ರಿಕೆಯನ್ನು ಹುಟ್ಟು ಹಾಕಿ ಅದರ ಪ್ರಾಧಾನ ಸಂಪಾದಕರಾಗಿ ಹೈದರಾಬಾದ್ ಮತ್ತು ಬೆಂಗಳೂರು ನಗರಗಳಿಂದ ಏಕಕಾಲಕ್ಕೆ ಮುದ್ರಣಗೊಳಿಸುತ್ತಿದ್ದಾರೆ. ಮತ್ತು ಹೈದರಾಬಾದಿನ ವಿಜಯವಾಣಿ ಪತ್ರಿಕೆಯ ವರದಿಗಾರರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ತೆಲುಗುನಾಡಿನಲ್ಲಿ ೨೦೦೫ರಿಂದ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಾ ನಾಡು ನುಡಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳು ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ, ಪ್ರಸಾರವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ