ಶನಿವಾರ, ಜನವರಿ 11, 2025
ನಾಗಲಿಂಗ ಕವಿ
`ನಾಗಲಿಂಗ ಕವಿ'ಎಂಬ ಕಾವ್ಯನಾಮ ಹೊಂದಿದ ಸಾಹಿತಿ ಹಾಗೂ ಮಠಾಧೀಶರೆಂದರೆ ಪೂಜ್ಯ. ಶ್ರೀ. ಲಿಂಗರಾಜೇಶ್ವರ ಮಹಾಸ್ವಾಮಿಗಳು. ಇವರು ಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದ ಗದಗೆಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧೧-೧೦-೧೯೫೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬೀದರ ತಾಲ್ಲೂಕಿನ ಕೈಲಾಸಪುರ (ಖಾಜಾಪುರ) ಗ್ರಾಮದ ಶ್ರೀ ಮಹಾತ್ಮ ರೇವಪ್ಪಯ್ಯ ಮಹಾದಾಸೋಹಿ ಪೀಠಾಧ್ಯಕ್ಷರಾಗಿ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ೧೯೮೪ರಲ್ಲಿ `ಬಬಲಾದಿ ಶ್ರೀ ಚೆನ್ನವೀರೆಶ್ವರ ಚರಿತ್ರೆ', ೧೯೯೩ರಲ್ಲಿ `ಕಲ್ಯಾಣ ನಾಡಿನ ಕೊನೆ ಶರಣ ಜ್ಯೋತಿ,' ೧೯೯೪ರಲ್ಲಿ `ಶರಣ ಪ್ರಭೆ, `ಪ್ರವಾದಿ ಪ್ರಭೆ ಸಹಸ್ರ ನಾಮಾವಳಿ', ಮತ್ತು `ಮಹಾಬೆಳಗು' ಎಂಬ ಕೃತಿಗಳು ರಚಿಸಿ ಪ್ರಕಟಿಸಿದರೆ, ೧೯೯೬ರಲ್ಲಿ `ಮನ ಭೋಧೆ ಶ್ರೀ ರೇವಪ್ಪಯ್ಯ', `ಧರ್ಮ ಜ್ಯೋತಿ, `ಸಾಹಿತ್ಯ ಸಂಗಮ,' ಎಂಬ ಇತ್ಯಾದಿ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು `ಭಾವ್ಯಕ್ತ ಬೆಳಕು', `ವಿಶ್ವ ಮಾನವ ವಚನಗಳು, `ಸಿದ್ದಪ್ರಭು ಕಂಡ ರೇವಪ್ಪಯ್ಯ' ಎಂಬ ಕೃತಿಗಳು ಅಪ್ರಕಟಿತವಾಗಿವೆ. ಇವರ ಕುರಿತು ಶ್ರೀ ಗುರುಸಿದ್ದಪ ಸೊಮರೆಳ್ಳಿಯವರು `ಚರ ಜಂಗಮ' ಎಂಬ ಕೃತಿಯು ರಚಿಸಿದರೆ ಎಂ.ಜಿ.ದೇಶಪಾAಡೆಯವರು `ನಾಗಲಿಂಗ ಕವಿಯ ತತ್ತ್ವ ತತ್ವಪದಗಳು' ಎಂಬ ತತ್ವ ಪದಗಳನ್ನು ಪುಸ್ತಕ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರು ತಮ್ಮ ಪ್ರಕಾಶನದ ವತಿಯಿಂದ ಕೆಲ ಲೇಖಕರ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೧೯೮೪ರಲ್ಲಿ ಅಫಜಲಪುರದ ಶ್ರೀ ಮಹಾಂತೇಶ್ವರ ಸಂಸ್ಥಾನ ಮಠದ ವತಿಯಿಂದ `ಧರ್ಮ ಜ್ಯೋತಿ' ಎಂಬ ಬಿರುದು ಪಡೆದರೆ, ೧೯೮೫ರಲ್ಲಿ ಕಲಬುರಗಿ ಮುಕ್ತಂಪೂರದ ಬಸವೇಶ್ವರ ಸಂಸ್ಥಾನ ಮಠದಿಂದ `ಸಾಹಿತ್ಯ ಭೂಷಣ ಪ್ರಶಸ್ತಿ, ಕಡಗಂಚಿಯ ಶಾಂತಲಿAಗೇಶ್ವರ ಸಂಸ್ಥಾನ ಕಟ್ಟಿಮಠದಿಂದ `ಶಿವ ಕವಿ' ಎಂಬ ಬಿರುದು ಪಡೆದುಕೊಂಡಿದ್ದಾರೆ. ೨೦೦೪ರಲ್ಲಿ ವಿಶ್ವ ಭಾರತಿ ಸೇವಾ ಸಂಘಟನೆಯಿAದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೨೦೧೫ರಲ್ಲಿ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಲಾವಿದ ರತ್ನ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ