ಶನಿವಾರ, ಜನವರಿ 11, 2025
ವೀರಶೆಟ್ಟಿ ಬಾವುಗೆ
ಸಾಹಿತಿ ವೀರಶೆಟ್ಟಿ ಬಾವುಗೆಯವರು. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ (ಎಸ್) ಗ್ರಾಮದ ಪ್ರಭುಶೆಟ್ಟಿ ಮತ್ತು ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎಡ್. ಪದವಿಧರರಾದ ಇವರು ೧೯೮೨ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿ, ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಸದ್ಯ ಡೊಣಗಾಪೂರ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಹೃದಯ ತರಂಗಗಳು', `ನೊಂದ ಬೆಂದವರು ' (ಕವನ ಸಂಕಲನಗಳು) `ಬೆಳಗಿನೊಳಗಣ ಬೆಳಗು', `ಮುಗಿಲ ಮರೆಯ ಮಿಂಚು’ ಎಂಬ ಆಧುನಿಕ ವಚನ ಸಂಕಲನ, `ವೈರಾಗ್ಯ ನಿಧಿ ಲಿಂಗಾAಗಯೋಗಿ ಶತಾಯುಷಿ ಡಾ.ಚನ್ನಬಸವ ಪಟ್ಟದ್ದೆವರು' ಮತ್ತು 'ಕಲ್ಯಾಣ ಶ್ರೀ' (ಚರಿತ್ರೆ) `ನಮ್ಮೂರು ಧನ್ನೂರು’ (ಗ್ರಾಮ ಚರಿತ್ರೆ) `ಆಧುನಿಕ ವಚನಕಾರರ ದೃಷ್ಠಿಯಲ್ಲಿ ಕಲ್ಯಾಣದ ವಿ.ಸಿದ್ದರಾಮಣ್ಣ ಶರಣರು’, `ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಬೀದರ ಜಿಲ್ಲೆ ಕ್ರಾಂತಿಕಾರಿಗಳು’, `ನೂತನ ವಚನಕಾರರ ದೃಷ್ಠಿಯಲ್ಲಿ ಮಹಾಂತ ಶಿವಯೋಗಿಗಳು’, `ಶಾಲೆಯಲ್ಲಿ ದಿನಕ್ಕೊಂದು ಶುಭಾಷಿತ’, `ಬೀದರ ಜಿಲ್ಲೆಯ ಉತ್ತಮ ಶಿಕ್ಷಕರು’, `ವಚನ ಜ್ಯೋತಿ', 'ವಚನ ಸಿರಿ', `ದಾಸೋಹದ ವಚನಗಳು', `ಸಾಹಿತ್ಯ ಜ್ಯೋತಿ', `ಶಿವಕಳೆ', `ಕನ್ನಡದ ದಿಗ್ಗಜರು', `ಸ್ನೆಹದ ಕಡಲಲ್ಲಿ ನೆನಪಿನ ದೋಣಿ-ಪಂಚಯ್ಯ ಸ್ವಾಮಿ’ ಎಂಬ ೨೩ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ೧೯೯೫ರಲ್ಲಿ ಭಾಲ್ಕಿ ಕಸಾಪದ ಗೌರವ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಮತ್ತು ಸಂಸ್ಕೃತಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ೨೦೦೮ರಲ್ಲಿ ಭಾಲ್ಕಿ ಕಸಾಪ ಅಧ್ಯಕ್ಷರಾಗಿ, ತಾಲೂಕಿನಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ. ಮತ್ತು ಗ್ರಾಮ, ಹೊಬಳಿ ಸಮ್ಮೇಳನ, ಗಡಿನಾಡು ಉತ್ಸವ ಮೊದಲಾದ ಕಾರ್ಯಕ್ರಮಗಳು ಮಾಡಿದ್ದಾರೆ. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ಕಸಾಪ ಜಿ.ಆರ್.ರೇವಯ್ಯಾ ದತ್ತಿ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ೨೦೧೪ರಲ್ಲಿ ಭಾಲ್ಕಿ ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ