ಶನಿವಾರ, ಜನವರಿ 11, 2025
ಡಾ.ಕಾಶಿನಾಥ ಚೆಲುವಾ
ಸಾಹಿತಿ ಡಾ.ಕಾಶಿನಾಥ ಚಲುವಾ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬಾಳೂರು ಗ್ರಾಮದ ಮರೆಪ್ಪಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್. ಪಿ.ಎಚ್.ಡಿ. ಪದವಿಧರರಾದ ಇವರು ೧೯೮೫ರಲ್ಲಿ ಪ್ರಾಥಮೀಕ ಶಾಲಾ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ, ಪ್ರೌಢ ಶಾಲಾ ಶಿಕ್ಷಣ ಸಂಯೊಜಕರಾಗಿ ಸೇವೆ ಸಲ್ಲಿಸಿ, ಸದ್ಯ ಭಾಲ್ಕಿ ತಾಲೂಕಿನ ಭಾಂತಬ್ರಾದ ಪದವಿಧರ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಚೌಚೌ ಬಾತ್' ಮತ್ತು 'ತ್ರಿಪದಿ ಚೌಪದಿ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ವಿಶೇಷವಾಗಿ ಬೌದ್ಧ ಧರ್ಮದ ಕಡೆಗೆ ಒಲವು ತೊರಿದ ಇವರು ಭಾಲ್ಕಿಯಲ್ಲಿ ೧೯೯೦ -೨೦೦೩ವರೆಗೆ ಬೌದ್ಧ ಮಹಾಸಭೆಯ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲೆಯಾದ್ಯಂತ ಬೌದ್ಧ ಧಮ್ಮ ಪ್ರಚಾರ ಮತ್ತು ಡಾ.ಅಂಬೇಡ್ಕರ್ ವಿಚಾರಧಾರೆಗಳನ್ನು ಪ್ರಚುರಪಡಿಸಿದ್ದಾರೆ. ಮತ್ತು ದಾಡಗಿಯಲ್ಲಿ `ಜ್ಯೋತಿ ಬಾ ಪುಲೆ ಪ.ಪೂ ಕಾಜೇಜು, ಬಾಳೂರಿನಲ್ಲಿ ವಿದ್ಯಾಭಾರತಿ ಪ್ರಾಥಮಿಕ ಶಾಲೆ, ಧನ್ನೂರಿನಲ್ಲಿ ಸಿದ್ದಾರ್ಥ ಪ್ರಾಥಮಿಕ ಶಾಲೆ, ಬೊಳೆಗಾಂವದಲ್ಲಿ ಮಿಲಿಂದ ಪ್ರಾಥಮಿಕ ಶಾಲೆ ಇವರ ಕುಟುಂಬದವರು ನಡೆಸುತ್ತಿರುವುದರಿಂದ ಅವರಿಗೆ ಶೈಕ್ಷಣಿಕವಾಗಿ ಮಾರ್ಗದರ್ಶಕರಾಗಿದ್ದಾರೆ. ಇವರು ಭಾಲ್ಕಿ ಶಿಕ್ಷಕರ ಸಂಘದ ತಾಲೂಕಾ ಎಸ್.ಸಿ.ಎಸ್.ಟಿ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಎಸ್.ಸಿ.ಎಸ್.ಟಿ. ತಾಲೂಕು ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ