ಶನಿವಾರ, ಜನವರಿ 11, 2025
ಶಿವರುದ್ರಯ್ಯಾ ಸ್ವಾಮಿ
ಸಾಹಿತಿ ಶಿವರುದ್ರಯ್ಯಾ ಸ್ವಾಮಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಲಖಣಗಾಂವ ಗ್ರಾಮದ ಬಂಡಯ್ಯ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೪ರಲ್ಲಿ ಜನಿಸಿದ್ದಾರೆ. ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಧರರಾದ ಇವರು ಕಮಲನಗರ ತಾಲೂಕಿನ ಶಾಂತಿವರ್ಧಕ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತುಂಬಾ ಆಸಕ್ತಿ ಹೊಂದಿ ಕಾಲೇಜು ಓದುವಾಗ ಕತೆ, ಕವನ, ಲೇಖನ ಪ್ರಬಂಧ ಬರೆಯುವ ಗೀಳು ಬೆಳೆಸಿಕೊಂಡು `ಚನ್ನನ ಮಹಿಮೆ' `ಲಕ್ಷ್ಮಿಬಾಯಿ ಖಂಡ್ರೆ ತಾಯಿ' 'ಬಸವಾದಿ ಶರಣರ ಜೋಗುಳ ಪದಗಳು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. 'ಆಧುನಿಕ ವಚನಗಳು' ಅಪ್ರಕಟಿತವಾಗಿವೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಗಳಲ್ಲಿ ಕವನ ವಾಚನ, ಉಪನ್ಯಾಸ ಮಾಡಿದ್ದಾರೆ ಇವರಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಶ್ರೀಗಳು `ಕನ್ನಡ ಸಿರಿ' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ