ಶನಿವಾರ, ಜನವರಿ 11, 2025
ಡಾ.ಕೆ.ಎಸ್.ಬಂಧು.ಸಿದ್ದೇಶ್ವರ
ದಲಿತ ಬಂಡಾಯ ಸಾಹಿತಿ ಡಾ.ಕೆ.ಎಸ್.ಬಂಧು. ಸಿದ್ದೇಶ್ವರ . ಇವರ ಪೂರ್ಣನಾಮ ಕಾಮಣ್ಣಾ ತಂದೆ ಶಂಕರೆಪ್ಪ ಬಂಧು ಎಂದಾಗಿದೆ. ಇವರು ಬೀದರ ಭಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮದ ಶಂಕರೆಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೨೮-೧೦-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರರಾದ ಇವರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. `ಏಕಲವ್ಯ' (ಪೌರಾಣಿಕ ನಾಟಕ) `ಅಕ್ಷರ ಕ್ರಾಂತಿ ಅಥವಾ ಜ್ಯೋತಿ' (ಕಿರುನಾಟಕ) `ಭೀಮವಾಣಿ', `ಭೀಮ ಘರ್ಜನೆ', `ಅಂಬೇಡ್ಕರ್ ಕ್ರಾಂತಿ ಗೀತೆಗಳು', `ರಮಾಬಾಯಿ ಅಂಬೇಡ್ಕರ್ ಮಹಿಳಾ ಗೀತೆಗಳು'. `ನಗು-ಮಗು' (ಕವನ ಸಂಕಲನಗಳು) `ನನ್ನ ಜೀವನ' (ಅಂಬೇಡ್ಕರ್ ಚರಿತ್ರೆ) `ಸಮಾಜ ಮುಖಿ' (ಲೇಖನ) `ಬಸವೇಶ್ವರ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ತತ್ವಗಳ ಪ್ರಸ್ತುತತೆ,’ `ಬುದ್ಧ ಮತ್ತು ಅವನ ಅನುಯಾಯಿಗಳು', `ಡಾ.ಅಂಬೇಡ್ಕರ್ ಮತ್ತು ಅವನ ಸಹಯೋಗಿ', `ತೊಂಚಿ', ಎಂಬ ಅನುಭವ ಕೃತಿ ಸೇರಿದಂತೆ ಹಲವಾರು ಕೃತಿಗಳು ಪ್ರಕಟಿಸಿದ್ದಾರೆ. ಇವರು ಕಸಾಪ ಮತ್ತು ದಲಿತ ಸಾಹಿತ್ಯ ಅಕಾದೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೦೨ರಲ್ಲಿ ಕರ್ನಾಟಕ ರಾಜ್ಯ ಹಿಂದಿ ಪ್ರತಿಭಾ ಪ್ರತಿಷ್ಠಾನ ಹುಬಯ- ಬೆಂಗಳೂರಿನಿAದ ರಾಜ್ಯ ಶಿಕ್ಷಕ ಪ್ರಶಸ್ತಿ, ೨೦೦೩ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ 'ಉತ್ತಮ ಶಿಕ್ಷಕ ಪ್ರಶಸ್ತಿ ಯು ನೀಡಿ ಗೌರವಿಸಿದೆ. ಮತ್ತು ಬೆಂಗಳೂರಿನ ವಾರದ ಸ್ಪೋಟ ಪತ್ರಿಕೆಯವರಿಂದ ೨೦೦೬ರಲ್ಲಿ `ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ೨೦೧೧ರಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾದೆಮಿ ಹೊಸ ದೆಹಲಿ ಇವರಿಂದ ರಾಷ್ಟ್ರ ಮಟ್ಟದ ಡಾ.ಅಂಬೇಡ್ಕರ್ ಫೆಲೋಶಿಪ್' ಹುಲಸೂರು ತಾಲೂಕು ಬೇಲೂರು ಮಠದಿಂದ `ಉರಿಲಿಂಗ ಪೆದ್ದಿ ಪ್ರಶಸ್ತಿ, ೨೦೦೮ರಲ್ಲಿ ಹುಬ್ಬಳಿಯ ಬೌದ್ಧ ಮಹಾಸಭಾದಿಂದ ರಾಜ್ಯ ಮಟ್ಟದ ಡಾ.ಅಂಬೇಡ್ಕರ್ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದವು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ