ಶನಿವಾರ, ಜನವರಿ 11, 2025
ಧನರಾಜ ಪುಲಾರೆ
ಪತ್ರಕರ್ತ ಹಾಗೂ ಲೇಖಕರಾದ ಧನರಾಜ ಪುಲಾರೆಯವರು. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಬಸವಣಪ್ಪಾ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಅರ್ಥಶಾಸ್ತ್ರ ಪದವಿಧರರಾದ ಇವರು ಬಸವಕಲ್ಯಾಣ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಬಾಲ್ಯದಿಂದಲೂ ಹವ್ಯಾಸಿ ಪತ್ರಕರ್ತರಾಗಿ ಗುರ್ತಿಸಿಕೊಂಡು ಬಸವಕಲ್ಯಾಣ ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೩ರಲ್ಲಿ `ಅಂತರAಗದಾಳ’ ಎಂಬ ಪುಸ್ತಕ ಪ್ರಕಟಿಸಿದ ಇವರು ಬಸವಕಲ್ಯಾಣ ಕಸಾಪ ಅಧ್ಯಕ್ಷರಾಗಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಸಾಪ ಅವಧಿಯಲ್ಲಿ ಮುಡಬಿ ವಲಯ ಕಸಾಪ ಅಧ್ಯಕ್ಷರಾದ ಮಲ್ಲಿನಾಥ ಹಿರೇಮಠ ಅವರ ಸಹಾಯದೊಂದಿಗೆ ಸುಕ್ಷೇತ್ರ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಪೂಜ್ಯ. ಶ್ರೀ. ಡಾ.ಚನ್ನವೀರ ಶಿವಾಚಾರ್ಯರ ಸನ್ನಿಧಿಯಲ್ಲಿ ಯಶಸ್ವಿಗೊಳಿಸಿದ್ದಾರೆ. ಸದ್ಯ ಇವರು ಅನಾರೋಗ್ಯದಿಂದ ಸಾಹಿತಿಗಳ ಬಳಗದಿಂದ ದೂರ ಉಳಿದಿರುವುದು ನೋವಿನ ಸಂಗತಿಯಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ