ಶನಿವಾರ, ಜನವರಿ 11, 2025
ಡಾ.ವೈಜಿನಾಥ ಭಂಡೆ
ಸಾಹಿತಿ ಡಾ.ವೈಜಿನಾಥ ಭಂಡೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಕಪ್ಪೆಕೇರಿ ಗ್ರಾಮದ ಗುರಪ್ಪ ಭಂಡೆ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೨೧-೧-೧೯೫೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ.ಮತ್ತು ಪಿ.ಎಚ್.ಡಿ.ಪದವೀಧರರಾದ ಇವರು ೧೯೭೮ರಲ್ಲಿ ಭಾಲ್ಕಿಯ ಸಿ.ಬಿ.ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ. ಪ್ರಾಧ್ಯಾಪಕ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಭಾಲಕಿ ತಾಲೂಕಿನ ಸ್ಥಳನಾಮಗಳು’ ಮತ್ತು `ಬೀದರ ಜಿಲ್ಲೆಯ ಸ್ಥಳನಾಮಗಳು' ಎಂಬ ಸಂಶೋಧನಾ ಕೃತಿಗಳು `ಸರ್ವಜ್ಞನ ವಚನಗಳು’ ಮತ್ತು `ಲೋಕ ನಾಯಕ ಭೀಮಣ್ಣ ಖಂಡ್ರೆ' ಎಂಬ ಅಭಿನಂದನಾ ಗ್ರಂಥವು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರಿಗೆ ಭಾತಂಬ್ರಾ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಮತ್ತು ೨೦೧೮ರಲ್ಲಿ ಬ್ಯಾಲಹಳ್ಳಿಯಲ್ಲಿ ನಡೆದ ೪ನೇ ಭಾಲ್ಕಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ