ಪುಟಗಳು

ಶನಿವಾರ, ಜನವರಿ 11, 2025

ಡಾ.ವೈಜಿನಾಥ ಭಂಡೆ

ಸಾಹಿತಿ ಡಾ.ವೈಜಿನಾಥ ಭಂಡೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಕಪ್ಪೆಕೇರಿ ಗ್ರಾಮದ ಗುರಪ್ಪ ಭಂಡೆ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೨೧-೧-೧೯೫೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ.ಮತ್ತು ಪಿ.ಎಚ್.ಡಿ.ಪದವೀಧರರಾದ ಇವರು ೧೯೭೮ರಲ್ಲಿ ಭಾಲ್ಕಿಯ ಸಿ.ಬಿ.ಕಾಲೇಜಿನ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ. ಪ್ರಾಧ್ಯಾಪಕ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಭಾಲಕಿ ತಾಲೂಕಿನ ಸ್ಥಳನಾಮಗಳು’ ಮತ್ತು `ಬೀದರ ಜಿಲ್ಲೆಯ ಸ್ಥಳನಾಮಗಳು' ಎಂಬ ಸಂಶೋಧನಾ ಕೃತಿಗಳು `ಸರ್ವಜ್ಞನ ವಚನಗಳು’ ಮತ್ತು `ಲೋಕ ನಾಯಕ ಭೀಮಣ್ಣ ಖಂಡ್ರೆ' ಎಂಬ ಅಭಿನಂದನಾ ಗ್ರಂಥವು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರಿಗೆ ಭಾತಂಬ್ರಾ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, ಮತ್ತು ೨೦೧೮ರಲ್ಲಿ ಬ್ಯಾಲಹಳ್ಳಿಯಲ್ಲಿ ನಡೆದ ೪ನೇ ಭಾಲ್ಕಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ