ಪುಟಗಳು

ಭಾನುವಾರ, ಜನವರಿ 12, 2025

ಡಾ.ಜಗನ್ನಾಥ ಹೆಬ್ಬಾಳೆ

ಜಾನಪದ ತಜ್ಞ, ಹಾಗೂ ಹಿರಿಯ ಸಾಹಿತಿ ಡಾ.ಜಗನ್ನಾಥ ಹೆಬ್ಬಾಳೆ. ಇವರು ಬೀದರ ತಾಲೂಕಿನ ನಾವದಗೇರಿ ಗ್ರಾಮದ ಶಿವರಾಯ ಮತ್ತು ರತ್ನಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೬೪ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್,ಪಿಎಚ್.ಡಿ.ಪದವಿಧರರಾದ ಇವರು ಬೀದರ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಕೆಂಪು ಮಣ್ಣಿನ ವಾಸನೆ' (ಕವನ ಸಂಕಲನ) `ಹೈದರಾಬಾದ ಕರ್ನಾಟಕದ ಜಾತ್ರೆಗಳು ಧರಿನಾಡಿನ ಬಿಂಬ ಪ್ರತಿಬಿಂಬ, `ಧರಿನಾಡಿನ ಜನಪದ ಹಾಡುಗಳು', `ಸತ್ತವರ ಹಾಡುಗಳು', `ಬೀದರ ಜಿಲ್ಲೆಯ ಬುಲಾಯಿ ಹಾಡುಗಳು', `ಓ ! ದೊರೆ ! ಬಾ `ಹಳೆಗನ್ನಡ ಸಾಹಿತ್ಯ ಸಂಗ್ರಹ', `ಜನಪದ ಕತೆಗಳ ಸಂಗ್ರಹ', `ಆರ್.ವಿ.ಬಿಡಪ್ ಜೀವನ ಮತ್ತು ಹೋರಾಟ', `ಧರಿನಾಡಿನ ಕಾವ್ಯ', `ಬೀದರ ಜಿಲ್ಲೆಯ ಗ್ರಾಮ ಚರಿತೆ ಕೋಶ', `ಜಾತ್ರೆಗಳು', `ವೀರಭದ್ರ ಜಾತ್ರೆ', `ಬಸವಪ್ರಭೆ', `ಭಾಹತ್ತರ', `ಬೀದರ ಜಿಲ್ಲೆಯ ಚಿತ್ರಕಲಾವಿದರು', `ಜಾನಪದ ಚಿಂತನೆ', `ಬೀದರ ಜಿಲ್ಲೆಯ ನಾಟಿ ವೈದ್ಯ ಪದ್ದತಿ', `ಮದುವೆ ಆಗುವ ಹುಡುಗನಿಗೆ', `ಬೀದರ ಜಿಲ್ಲೆಯ ಸಾಹಿತ್ಯಾವಲೋಕನ', `ಅಕ್ಷರ ಪ್ರೀತಿ', `ಶಿಖರಗನ್ನಡಿ', 'ಬೆಳಕಿಂಡಿ', `ಲೋಕಶ್ರೀ', `ಜಾನಪದ ದರ್ಪಣ', `ಜಾನಪದ ಶಿಲೆ', `ಸತ್ಯದ ನಿಲವ', `ಜಾನಪದ ಸಾಹಿತ್ಯ ಚಿಂತನೆ', `ಲೋಕ ಸಂಸ್ಕೃತಿ', `ಜಾನಪದ ದೃಷ್ಟಿ' ಸೇರಿದಂತೆ ೬೭ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಮತ್ತು ಗುಲಬರ್ಗಾ, ಕೊಲ್ಹಾಪುರ, ಸೊಲ್ಲಾಪುರ, ನಾಂದೇಡ, ಬೆಂಗಳೂರು,ಹAಪಿ ವಿಶ್ವವಿದ್ಯಾಲಯಗಳಿಗೆ ಪದವಿ ಪಠ್ಯ ಪುಸ್ತಕಗಳಾಗಿ, ಆಕಾರ ಗ್ರಂಥಗಳಾಗಿ ಪ್ರಕಟಗೊಂಡಿವೆ ಇವರು ೩ ಅವದಿಗೆ ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಭಾರತ ಸರ್ಕಾರ ಜಾನಪದ ತಜ್ಞ ಸಮಿತಿಯ ಸದಸ್ಯರಾಗಿ, ಜಾನಪದ ಅಕಾಡೆಮಿ ಸದಸ್ಯರಾಗಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸಮಿತಿ ಸದಸ್ಯರಾಗಿ, ಕೆಲ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಮಂಡಳಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದ್ದಾರೆ. ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾಗಿ, ಮತ್ತು ಕರ್ನಾಟಕ ಬರಹಗಾರರು ಮತ್ತು ಕಲಾವಿದರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ `ಶಿಕ್ಷಕ ರತ್ನ ಪ್ರಶಸ್ತಿ, ಕಸಾಪದಿಂದ ಕನ್ನಡ ಶ್ರೀ ಪ್ರಶಸ್ತಿ, ಅಂತರಾಷ್ಟ್ರೀಯ ರಿಫಾರಮ್ಸ್ಸಂಸ್ಥೆಯಿAದ ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನಿಂದ ಡಾ.ಜಿ.ಶಂ.ಪರಮಶಿವಯ್ಯಾ ಪ್ರಶಸ್ತಿ, ಬೆಂಗಳೂರಿನಿAದ ಡಿ.ಎನ್.ಮ್ಯಾಕ್ಸ್ ಸಾಹಿತ್ಯ ಶ್ರೀ ಪ್ರಶಸ್ತಿ, ಮತ್ತು ದಕ್ಷಿಣ ಅಮೆರಿಕದ ವಿಶ್ವವಿದ್ಯಾಲಯವು ಗೌರವ ಡಿ.ಲಿಟ್.ಪದವಿ ಪಡೆದಿದ್ದಾರೆ. ಇವರು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದ ಜಾನಪದ ಸಮ್ಮೇಳನ, ವಿಚಾರ ಸಂಕಿರಣ, ಕವಿಗೊಷ್ಠಿಗಳನ್ನು ಆಯೋಜಿಸಿದ್ದಾರೆ. ಜಾನಪದ ಭಾಷಾ ಭಾವೈಕ್ಯತೆ ಸಮಾವೇಶಗಳು, ನೃತ್ತೋತ್ಸವಗಳು, ಗಡಿನಾಡು ಕನ್ನಡಿಗರ ಸಮಾವೇಶ, ಕಮ್ಮಟಗಳು ಮತ್ತು ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಗೊಳಿಸಿದ್ದಾರೆ. ಇವರ ಜೀವಮಾನ ಸಾಧನೆ ಕುರಿತು ಡಿ.ಡಿ. ಚಂದನ ವಾಹಿನಿಯಲ್ಲಿ ೩೦ ನಿಮಿಷದ ಕಾರ್ಯಕ್ರಮ ಪ್ರಸಾರಗೊಂಡಿದೆ. ಸದ್ಯ ಇವರು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಸಂಘ ಸಂಸ್ಥೆಗಳ ಅನುದಾನ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ