ಭಾನುವಾರ, ಜನವರಿ 12, 2025
ನಾಗೇಂದ್ರ ದಂಡೆ
ಬಂಡಾಯ ಸಾಹಿತಿ ನಾಗೇಂದ್ರ ದಂಡೆ, ಬೀದರದ ಸಿದ್ರಮಪ್ಪ ಮತ್ತು ಹಿರಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೬೪ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಸಮಾಜ ಸೇವಕರಾಗಿ ಹಲವು ಸಾಹಿತ್ಯ ರಚನೆ ಮಾಡಿದ್ದಾರೆ. ಅವುಗಳೆಂದರೆ `ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಾವಿನ ಸುತ್ತ, `ಮತಾಂತರ ಬೌದ್ಧ ಸವಲತ್ತುಗಳು ಮತ್ತು ಭಾರತ ಸಂವಿಧಾನ, ಬೌದ್ಧ ಶಾಸನದ ರತ್ನಗಳು, ಬೋಧಿಸತ್ವ ಡಾ.ಬಾಬಾಸಾಹೇಬ ಅಂಬೇಡ್ಕರ್' ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು `ಭೀಮನ ಮರೆತರೆ ನಿಂಗಾ, ಬುದ್ಧ ವಂದನಾ' ಎಂಬ ಧ್ವನಿ ಸುರುಳಿಗಳು ಹೊರತಂದಿದ್ದಾರೆ. ಅಷ್ಟೇಯಲ್ಲದೆ ನೂರಾರು ಗಜಲ್ ಗಳು ಕೂಡ ರಚಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ