ಪುಟಗಳು

ಭಾನುವಾರ, ಜನವರಿ 12, 2025

ಮುರಲಿನಾಥ ಜಿ.ಮೇತ್ರೆ

ಆಧುನಿಕ ವಚನಕಾರ ಮುರಲಿನಾಥ ಜಿ.ಮೇತ್ರೆ.. ಇವರು ಬೀದರ ತಾಲೂಕಿನ ಖಾಸೆಂಪೂರ (ಸಿ) ಗ್ರಾಮದ ಶ್ರೀ ಗುಂಡಪ್ಪಾ ಮತ್ತು ಶ್ರೀಮತಿ ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವಿಧರರಾದ ಇವರು ೧೯೯೮ರಲ್ಲಿ ಬೀದರದ ಬೊಪ್ಪಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಅತಿವಾಳ ಗ್ರಾಮದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ವೃತ್ತಿ ಬದುಕಿನೊಂದಿಗೆ ಅಧ್ಯಾತ್ಮಿಕ ಮತ್ತು ವೈಚಾರಿಕ ದೃಷ್ಟಿಕೋನದಿಂದ ಕೆಲ ಆಧುನಿಕ ವಚನಗಳು, ಬರೆದಿದ್ದು ಅವುಗಳು ಒಟ್ಟು ಸೇರಿಸಿ ೨೦೧೩ರಲ್ಲಿ `ಎಚ್ಚರಿಕೆಯ ವಚನಗಳು' ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ೨೦೦೩ರಲ್ಲಿ ಬೀದರ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ೨೦೨೦ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ. ವಚನ ವಿಜಯೋತ್ಸವ ಪ್ರಶಸ್ತಿ, ಕಸಾಪ ಪ್ರಶಸ್ತಿ, ಮತ್ತು ಕೃಷಿ ಪ್ರಶಸ್ತಿ ಸೇರಿದಂತೆ ಮೊದಲಾದವು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ