ಭಾನುವಾರ, ಜನವರಿ 12, 2025
ಶೈಲಜಾ ಜಿ.ಹುಡಗೆ
ಕವಯತ್ರಿಯಾದ ಶೈಲಜಾ ಜಿ.ಹುಡಗೆ ಯವರು ಬೀದರದ ಅಪ್ಪಾರಾವ ಪಾಟೀಲ್ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೨೯-೧೨-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ಜ್ಞಾನಾಮೃತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಸಂಸ್ಥೆಯಡಿಯಲ್ಲಿ ಚಿಟಗುಪ್ಪ ತಾಲೂಕಿನಲ್ಲಿ ವಿದ್ಯಾ ವಿಜ್ಞಾನ ಪ್ರಾಥಮಿಕ ಶಾಲೆ ಮತ್ತು ಜ್ಞಾನ ದರ್ಶನ ಪ್ರೌಢ ಶಾಲೆಗಳನ್ನು ಪ್ರಾರಂಭಿಸಿ ಶಿಕ್ಷಣವನ್ನು ನೀಡುತ್ತಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿಯೇ ಕವನ, ಹನಿಗವನ, ಲೇಖನ, ವಿಜ್ಞಾನ ಬರಹಗಳೊಂದಿಗೆ ಹಲವು ವೈಜ್ಞಾನಿಕ ಗೀತೆಗಳು ರಚಿಸುವ ಗೀಳು ಬೆಳೆಸಿಕೊಂಡ ಇವರು ೨೦೧೫ರಲ್ಲಿ `ಭಾವ ಸ್ಪಂದನ' ೨೦೧೯ರಲ್ಲಿ `ಭಾವ ದೀಪ್ತಿ' (ಕವನ ಸಂಕಲನಗಳು) 'ಅನುಭಾವ ತರಂಗ' (ಆಧುನಿಕ ವಚನ ಸಂಕಲನ) 'ಶಿಕ್ಷಣ ಕಿರಣ' (ಮಕ್ಕಳು, ಪಾಲಕರ ಕೈಪಿಡಿ) ಮತ್ತು 'ಕನ್ನಡದ ಹೋರಾಟಗಾರ ಹಣಮಂತಪ್ಪ ಪಾಟೀಲ್’ (ವ್ಯಕ್ತಿ ಚಿತ್ರಣ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಲೇಖನ ವೈಜ್ಞಾನಿಕ ಬರಹಗಳು 'ಬಾಲ ವಿಜ್ಞಾನ’ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಸಾಧನೆಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ಅರುಂಧತಿ ಪ್ರಶಸ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಪಂಚಾಕ್ಷರಿ ಗವಾಯಿಗಳ ಸಂಘದಿAದ ಸಾಹಿತ್ಯ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ