ಭಾನುವಾರ, ಜನವರಿ 12, 2025
ನಾಗಮೂರ್ತಿ ಜೆ.ಪಂಚಾಳ
`ಸ್ಪೂರ್ತಿ' ಎಂಬ ಕವನಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕರೆಂದರೆ, ನಾಗಮೂರ್ತಿ ಜೆ.ಪಾಂಚಾಳ. ಇವರು ಬೀದರ ತಾಲೂಕಿನ ಮರಕುಂದ ಗ್ರಾಮದ ಜರ್ನಾಧನ ಮತ್ತು ಬಕ್ಕಮ್ಮ ದಂಪತಿಗಳಿಗೆ ದಿನಾಂಕ ೩-೫-೧೯೭೪ ರಲ್ಲಿ ಜನಿಸಿದ್ದಾರೆ. ಇವರು ಡಿಪ್ಲೊಮಾ ಇನ್ ಮ್ಯಾಕ್ಯಾನಿಕಲ್ ಇಂಜಿನಿಯರಿAಗ್ ಪದವಿಯನ್ನು ಪಡೆದು ಸದ್ಯ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕತೆ ಕವನ ಲೇಖನ ಬರೆಯುವ ಗೀಳು ಬೆಳೆಸಿಕೊಂಡ ಇವರು ಸುಮಾರು ಹದಿನೆಂಟು ವರ್ಷಗಳ ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಕವನಸಂಕಲನ ಬರೆದು ದೂರ ಉಳಿದಿದ್ದರು. ಅವರ ಸ್ನೇಹಿತರ ಒತ್ತಾಸೆಯ ಮೆರೆಗೆ ಮತ್ತೆ ಬರವಣಿಗೆಯಲ್ಲಿ ತೊಡಗಿಸಿಕೊಂಡು, ಹಲವಾರು ಕತೆ, ಕವನ, ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ