ಪುಟಗಳು

ಭಾನುವಾರ, ಜನವರಿ 12, 2025

ಡಾ.ಶಾಮರಾವ ನೆಲವಾಡೆ

ಸಾಹಿತಿ, ಪತ್ರಕರ್ತ, ಸಂಪಾದಕರಾದ ಡಾ.ಶಾಮರಾವ ನೆಲವಾಡೆ. ಇವರು ಬೀದರದ ಗೋಪಾಲರಾವ ಮತ್ತು ಸುಭದ್ರಾಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೭೩ರಲ್ಲಿ ಜನಿಸಿದ್ದಾರೆ. ಎಂ.ಎ. ಸ್ನಾತಕೋತ್ತರ ಪದವಿಧರರಾಗಿದ್ದು ೨೦೧೩ರಲ್ಲಿ `ನೆನಪಾಗಿದೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ವೀರೆಂದ್ರ ಸಿಂಪಿಯವರ ಲಲಿತಾರವಿಂದ ಅಭಿನಂದನಾ ಗ್ರಂಥದ ಸಂಪಾದಕ ಮಂಡಳಿ ಸದಸ್ಯರಾಗಿ, ಕಿಡಿನುಡಿ ಪತ್ರಿಕೆಯ ಸಂಪಾದಕರಾಗಿ, ಯುವ ಸಂಸ್ಕ್ರತಿ ಮತ್ತು ವಚನ ಚಂದ್ರಿಕೆ ಸಹಸಂಪಾದಕರಾಗಿ, ಚಿತ್ತಾರ ಸ್ಮರಣ ಸಂಚಿಕೆಯ ಸಂಪಾದಕ ಮಂಡಲಿಯ ಸದಸ್ಯರಾಗಿ, ದಾಸಸಿರಿ ಸ್ಮರಣ ಸಂಚಿಕೆಯ ಸಹಸಂಪಾದಕರಾಗಿ ,ಸೇವೆ ಸಲ್ಲಿಸಿದ ಇವರು ಸಾಹಿತ್ಯ ಸಿಂಚನ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೨ರಿಂದ ೨೦೦೪ರವರೆಗೆ ಬೀದರ ಕನ್ನಡ ಸಂಘದ ಜಿಲ್ಲಾ ಕಾರ್ಯದರ್ಶಿ, ೨೦೦೪ರಲ್ಲಿ ತಾಲೂಕು ಕಸಾಪ ಕಾರ್ಯಕಾರಿ ಸದಸ್ಯರಾಗಿ, ನೃಪತುಂಗ ಕನ್ನಡ ಬಳಗದ ಕಾರ್ಯದರ್ಶಿಯಾಗಿ, ೨೦೦೯ರಿಂದ ೨೦೧೩ರವರೆಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ೨೦೦೯ರಲ್ಲಿ ಕರ್ನಾಟಕ ಗಡಿಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾಗಿ, ೨೦೦೮ರಿಂದ ೨೦೧೦ರವರೆಗೆ ತಾಲೂಕು ಕಸಾಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೧೯೯೨ರಲ್ಲಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಂಘದಿAದ ಸ್ವಯಂ ಸೇವಕ ಪ್ರಶಸ್ತಿ, ಜನಪ್ರಿಯ ಪ್ರಕಾಶನದಿಂದ ಸಾಹಿತ್ಯ ಸಿರಿ ಪ್ರಶಸ್ತಿ ೨೦೧೪ರಲ್ಲಿ ಮಡಿಕೇರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ