ಪುಟಗಳು

ಭಾನುವಾರ, ಜನವರಿ 12, 2025

ಸಂಜೀವಕುಮಾರ ಅತಿವಾಳೆ

ಸಾಹಿತಿ ಸಂಜೀವಕುಮಾರ ಅತಿವಾಳೆಯವರು ಬೀದರ ತಾಲೂಕಿನ ಅತಿವಾಳ ಗ್ರಾಮದ ಬಕ್ಕಪ್ಪಾ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ೨೦೦೨ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಇವರು ಅಣದೂರವಾಡಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲಿ ತುಂಬ ಆಸಕ್ತರಾಗಿರುವುದರಿಂದ ೨೦೦೯ರಲ್ಲಿ `ಸ್ವಾತಂತ್ರ‍್ಯ' (ಕವನ ಸಂಕಲನ) ೨೦೧೦ರಲ್ಲಿ `ಪ್ರಬಂಧ ಲೋಕ' ೨೦೧೧ರಲ್ಲಿ `ನುಡಿಕಿಡಿ' (ಸಂಪಾದನೆ) ೨೦೧೯ರಲ್ಲಿ `ಚೌಕಟ್ಟಿನಾಚೆಯಲ್ಲಿ' (ಲೇಖನ ಸಂಕಲನ) ಕೃತಿಗಳು ಹೊರ ತಂದಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆ, ೧೫ಸ್ಮರಣ ಸಂಚಿಕೆ, ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಇವರು ಜಿಲಾ,್ಲ ರಾಜ್ಯ ಮಟ್ಟದ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಚಟುವಟಿಕೆಗಳನ್ನು ಮಾಡಿದ್ದಾರೆ. ಮತ್ತು `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಸಾಹಿತ್ಯ ಮಾಸಪತ್ರಿಕೆಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಮೈಸೂರಿನಲ್ಲಿ ನಡೆದ ಆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ `ಗೌರವ ಡಾಕ್ಟರೇಟ್' ಪದವಿಯು ನೀಡಿ ಸತ್ಕಾರಿಸಿದ್ದಾರೆ. ಇವರ ಸಾಹಿತ್ಯ ಸಾಮಾಜಿಕ ಸಾಧನೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಬೀದರನಲ್ಲಿ `ಸೃಜನಶೀಲ ಸಾಂಸ್ಕೃತಿಕ-ಶೈಕ್ಷಣಿಕ ಹಾಗೂ ಚಾರಿಟೇಬಲ್ ಟ್ರಸ್ಟ್ ಹುಟ್ಟು ಹಾಕಿ ಬಡವರಿಗೆ ಆರ್ಥಿಕ ನೆರವು ನೀಡುವ ಚಿಂತನೆಯೊAದಿಗೆ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಿರುವ ಇವರು ೨೦೧೫ರಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ದೇಹದಾನವು ಮಾಡಿ ಮಾನವಿಯತೆ ಮೆರೆದಿದ್ದಾರೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ