ಪುಟಗಳು

ಭಾನುವಾರ, ಜನವರಿ 12, 2025

ಡಾ. ನಾಗಶೆಟ್ಟಿ ಪಾಟೀಲ್. ಗಾದಗಿ

ಸಾಹಿತಿ ಡಾ. ನಾಗಶೆಟ್ಟಿ ಪಾಟೀಲ್ ಗಾದಗಿ. ಇವರು ಬೀದರ ತಾಲೂಕಿನ ಗಾದಗಿ ಗ್ರಾಮದ ಭಗಂತರಾವ ಮತ್ತು ಪಾರ್ವತಿಬಾಯಿ ದಂಪತಿಗಳಿಗೆ ದಿನಾಂಕ ೧೦-೬-೧೯೭೯ರಲ್ಲಿ ಜನಿಸಿದ್ದಾರೆ. ಬಿ.ಎ .ಪದವಿ ಪಡೆದ ಇವರು ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ. ಬಾಲ್ಯದಿಂದಲೂs ಸಾಹಿತ್ಯದಲ್ಲಿ ಆಸಕ್ತರಾದ ಇವರು `ಸಾಮ್ರಾಜ್ಯ’, `ಯಾರಿವಳು' (ಕವನ ಸಂಕಲನಗಳು) `ಬದುಕಿನ ಸುತ್ತ ಸಮನ್ವಯ ಸರಪಳಿ', `ಭಾನು', `ಶಿವ ಮಹಿಮೆ’ (ಕಥಾ ಸಂಕಲನಗಳು) `ವಿಜ್ಞಾನ ಮತ್ತು ವೈಚಾರಿಕತೆ' `ಪವಾಡಗಳು ನಿಜವೇ ?' (ವೈಚಾರಿಕ) `ಬದುಕಿಗೊಂದು ಸ್ಪೂರ್ತಿಯ ಸೇಲೆ' `ಜ್ಞಾನ ಪೀಠ ಪ್ರಶಸ್ತಿ ಪಡೆದ ದಿಗ್ಗಜರು ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ೨೦೦೬ರಲ್ಲಿ ಜನಪ್ರಿಯ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ೫೧ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಧಾರವಾಡದ ಮಾನವ ಧರ್ಮ ವಚನ ಪೀಠದಿಂದ ಸುವರ್ಣ ಕಮಲ ಪ್ರಶಸ್ತಿ, ಬೆಂಗಳೂರಿನ ಸ್ಪಂದನ ಸೇವಾ ಒಕ್ಕೂಟದಿಂದ ಯುವ ಶಕ್ತಿ ಪ್ರಶಸ್ತಿ, ಯಳಂದೂರಿನ ಅಂಬಾ ಪ್ರಕಾಶನದಿಂದ ಸುವರ್ಣ ಸಿರಿ’ ಪ್ರಶಸ್ತಿ ಗಳು ಪಡೆದಿದ್ದಾರೆ. ಇವರಿಗೆ ೨೦೧೯ರಲ್ಲಿ ನ್ಯಾಶನಲ್ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಗಿದೆ. ಸದ್ಯ ಇವರು ದಾರಿ ದೀಪ ಮತ್ತು ಜನಪ್ರಿಯ ಕನ್ನಡ ಟಿವಿ ಎಂಬ ಯೂಟ್ಯೂಬ್ ಚಾನಲ್ ಗಳು ನಡೆಸುತ್ತಿದ್ದಾರೆ. ೨೦೦೬ರಿಂದ ಜನಪ್ರಿಯ ಪ್ರಕಾಶನದ ವತಿಯಿಂದ ಪ್ರತಿ ವರ್ಷ ದೀಪಾವಳಿ ಪ್ರಯುಕ್ತ ವಿವಿಧ ಸಾಹಿತ್ಯಕ ಸ್ಪರ್ಧೆಗಳನ್ನು ಏರ್ಪಡಿಸಿ ಉದಯೋನ್ಮುಖರಿಗೆ ಪ್ರೋತ್ಸಾಹಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ