ಪುಟಗಳು

ಭಾನುವಾರ, ಜನವರಿ 12, 2025

ಚಂದ್ರಕಲಾ ಜೆ.ಬಡಿಗೇರ

ಉದಯೋನ್ಮುಖ ಮಹಿಳಾ ಸಾಹಿತಿಯಾದ ಚಂದ್ರಕಲಾ ಜೆ.ಬಡಿಗೇರ. ಇವರು ಬೀದರದ ಅರ್ಜುನರಾವ ನವಲಪೂರೆ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧೦-೬-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಸಮತಾ ಸೈನಿಕ ದಳದ ಕಲಬುರಗಿಯ ವಿಭಾಗಿಯ ಮಟ್ಟದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಮತಾ ಸೈನಿಕ ದಳದಲ್ಲಿ ಉಚಿತವಾಗಿ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಇವರು ಬಾಲ್ಯದಿಂದಲೂ ಬುದ್ಧ, ಬಸವ,ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವ ಕಾಳಜಿಯನ್ನು ಹೊಂದಿದ್ದು ಆ ಮಹಾನುಭಾವರ ತತ್ವ ಸಿದ್ಧಾಂತಗಳು ಮೈಗೂಡಿಸಿಕೊಂಡು ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, ೨೦೧೮ರಲ್ಲಿ `ಬಾಬಾಸಾಹೇಬ ಅಂಬೇಡ್ಕರವರು ಭಾರತದಲ್ಲಿನ ಜನತೆಗೆ ನೀಡಿರುವ ೨೨ ಪ್ರತಿಜ್ಞೆಗಳು', ೨೦೧೯ರಲ್ಲಿ `ಡಾ.ಬಾಬಾಸಾಹೇಬ ಅಂಬೇಡ್ಕರ್ ಮತ್ತು ಅವರ ಸಮತಾ ಸೈನಿಕ ದಳ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಡಾ.ಅಂಬೇಡ್ಕರ್ ವಿಚಾರ ಧಾರೆ ಸಾಹಿತ್ಯದ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಬರಹಗಳು ಕನ್ನಡದ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ