ಪುಟಗಳು

ಶುಕ್ರವಾರ, ಜನವರಿ 10, 2025

ಎಸ್.ವಿ.ಕಲ್ಮಠ

ವಿಜ್ಞಾನ ಬರಹಗಾರ ಎಸ್.ವಿ.ಕಲ್ಮಠ. ಇವರ ಪೂರ್ಣನಾಮ ಸಂಗಯ್ಯಾ ವೀರಂತಯ್ಯಾ ಕಲ್ಮಠ ಎಂದಾಗಿದೆ. ಇವರು ಬೀದರ ಜಿಲ್ಲೆ ಚಿಟಗುಪ್ಪದ ವೀರಂತಯ್ಯಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೩೦-೮-೧೯೫೩ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಜಿ.ಡಿ.ಇ.ಎಂ. ಪದವಿಧರರಾದ ಇವರು ೧೯೭೬ರಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು `ಜನಪ್ರಿಯ ವಿಜ್ಞಾನ ಲೇಖನಗಳು' (ಲೇಖನ) `ಪದವಿ ಪೂರ್ವ ವಿಜ್ಞಾನ ಜೀವಶಾಸ್ತ್ರ-೧' ಎಂಬ ಪಿ.ಯು.ಸಿ. ಜೀವಶಾಸ್ತ್ರ ವಿಷಯದ ಪಠ್ಯಪುಸ್ತಕ, `ಹೈದರಾಬಾದ್ ಕರ್ನಾಟಕ ಸಂಗೀತ ಪರಂಪರೆ' (ಆಕರ ಗ್ರಂಥ) ೧೯೯೨ರಲ್ಲಿ `ಪಂಚಾಕ್ಷರಿ ಸ್ಮರಣ ಸಂಚಿಕೆ' ಮತ್ತು ೨೦೧೬ರಲ್ಲಿ `ಸ್ಮರಣ ಸಂಚಿಕೆ ಗಾನಯೋಗಿ-೧' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ಬರಹಗಳು ವಿಜ್ಞಾನ ಸಂಗಾತಿ, ದಿಕ್ಸೂಚಿ, ಬಾಲವಿಜ್ಞಾನ, ಬಾಲವಿಕಾಸ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು 'ಬಾಲವಿಜ್ಞಾನ' ಮಾಸಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ, ಬೀದರ ಜಿ.ಪಂ. `ಜೀವ ವೈವಿಧ್ಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಜೀವ ವೈವಿಧ್ಯತೆ ಪ್ರಾಧಿಕಾರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತದಲ್ಲಿಯು ತುಂಬಾ ಆಸಕ್ತರಾದ ಇವರು ೨೦೧೧ರಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಸಂಗೀತ ವಿದ್ಯಾಲಯ ಸ್ಥಾಪಿಸಿ ಕರ್ನಾಟಕ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಶಿಕ್ಷಣ, ಉಪನ್ಯಾಸವನ್ನು ನೀಡುತ್ತಿದ್ದಾರೆ. ಆದ್ದರಿಂದ ಇವರಿಗೆ ೨೦೧೧ರಲ್ಲಿ ಕರ್ನಾಟಕ ಸರ್ಕಾರ `ಜೀವ ವೈವಿಧ್ಯ ಪ್ರಶಸ್ತಿ' ನೀಡಿ ಗೌರವಿಸಿದೆ. ಮತ್ತು ೨೦೧೫ರಲ್ಲಿ ಗದಗಿನ ಗಾನಗಂಧರ್ವ ಕಲಾ ಟ್ರಸ್ಟ್ ನಿಂದ `ಸಮಾಜ ಸೇವಾ ರತ್ನ' ಪ್ರಶಸ್ತಿ, ೨೦೧೬ರಲ್ಲಿ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಂಗೀತ ಕ್ರಾಂತಿಕಾರಿ ಚೂಡಾಮಣಿ' ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಷ್ಟೇಯಲ್ಲದೆ ಇವರಿಗೆ ೨೦೧೭ರಲ್ಲಿ ಚಿಟಗುಪ್ಪ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ