ಶುಕ್ರವಾರ, ಜನವರಿ 10, 2025
ಅಣ್ಣೆಪ್ಪ ರೊಡ್ಡಾ
ಹಿರಿಯ ಸಾಹಿತಿ ಅಣ್ಣೆಪ್ಪ ರೊಡ್ಡಾ ರವರು ಮೂಲತಃ ಚಿಟಗುಪ್ಪಾ ತಾಲೂಕಿನ ಮೀನಕೇರಾ ಗ್ರಾಮದ ವೀರಸಂಗಪ್ಪನವರ ಪುತ್ರನಾಗಿ ದಿನಾಂಕ ೮-೧೧-೧೯೪೫ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿ ಕತೆ ಕವನ, ಲೇಖನ ನಾಟಕ ಮೊದಲದವು ಬರೆದು ೨೦೧೪ರಲ್ಲಿ `ಕಾಗದ ಕುದುರೆ’ (ಕವನಸಂಕಲನ) ಪ್ರಕಟಿಸಿದ್ದಾರೆ. ಮತ್ತು ೧೯೭೧ರಲ್ಲಿ `ಮತಿಗೆಟ್ಟ ಮಡದಿ’ ಎಂಬ ಸಾಮಾಜಿಕ ನಾಟಕ, `ಮೀನಕೇರಾ ಗ್ರಾಮ ದರ್ಶನ’, `ಆಧುನಿಕ ವಚನಗಳು’, `ಚುಟುಕು ಚುಡಾರತ್ನ’ ಎಂಬ ಕೃತಿಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ