ಭಾನುವಾರ, ಜನವರಿ 12, 2025
ಬಸವರಾಜ ಮಯೂರ
ದಲಿತ, ಬಂಡಾಯ ಸಾಹಿತಿ ಬಸವರಾಜ ಮಯೂರ. ಇವರು ಬೀದರ ತಾಲೂಕಿನ ಯಾಕತಪೂರ ಗ್ರಾಮದ ಸಂಬಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ೧೯೯೭ರಿಂದ ಪಿ.ಯು.ಉಪನ್ಯಾಸಕರಾಗಿ ಸೇವೆಗೆ ಸೇರಿ ಸದ್ಯ ಯಾದಗಿರಿ ಜಿಲ್ಲೆಯ ಬಳಿಚಕ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳೆಂದರೆ ೨೦೦೫ರಲ್ಲಿ `ತಿಂದವರ ತೇಗು ಹಸಿದವರ ಕೂಗು' (ಕವನ ಸಂಕಲನ) ೨೦೧೫ರಲ್ಲಿ `ಶಿಕ್ಷಣ ಸುಧಾರಕ ಆರ್ ಮಹಾದೇವಪ್ಪ' (ವ್ಯಕ್ತಿ ಚಿತ್ರಣ) `ವಿದ್ಯಾರ್ಥಿಗಳ ದಾರಿ ದೀಪ' (ಮಾರ್ಗದರ್ಶಿ ಕೈಪಿಡಿ) `ಜ್ಞಾನ ಜ್ಯೋತಿ' (ವಿಮರ್ಶೆ) ಎಂಬ ಕೃತಿಗಳು ಹೊರತಂದಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಉತ್ತಮ ಸಂಘಟಕರು ಕೂಡ ಆಗಿರುವುದರಿಂದ ಬೀದರ ಜಿಲ್ಲಾ ಸಮನ್ವಯ ಸಮಿತಿಯ ಕಾರ್ಯದರ್ಶಿಯಾಗಿ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ ಮತ್ತು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಾಹಿತ್ಯ, ಸಂಘಟನೆ, ಮತ್ತು ಶೈಕ್ಷಣಿಕ ಸೇವೆಯನ್ನು ಕಂಡು ಕಲಬುರಗಿ ವಿಭಾಗ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ, ಯಾದಗಿರಿ ಜಿಲ್ಲಾ ಉತ್ತಮ ಕನ್ನಡ ಉಪನ್ಯಾಸಕ ಪ್ರಶಸ್ತಿ, ಬೀದರ ಕಸಾಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ