ಪುಟಗಳು

ಭಾನುವಾರ, ಜನವರಿ 12, 2025

ದಿ.ಚನ್ನಯ್ಯ ಸ್ವಾಮಿ ಹೀರೆಮಠ

ಸಾಹಿತಿ ಚನ್ನಯ್ಯ ಸ್ವಾಮಿ ಹೀರೆಮಠ ರವರು ತೆಲಂಗಾಣ ರಾಜ್ಯದ ಮೆದಕ್ ಜಿಲ್ಲೆ ನಾರಾಯಣಖೇಡ ತಾಲೂಕಿನ ಮಾವಿನಹಳ್ಳಿ ಗ್ರಾಮದ ಮಡಿವಾಳಯ್ಯ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೧೬-೧೨-೧೯೩೨ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಕಮಲನಗರದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಹಿಂದಿ ಭಾಷಾ ಪ್ರೌಢ ಶಾಲಾ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೯೧ರಲ್ಲಿ ನಿವೃತ್ತರಾಗಿದ್ದಾರೆ. ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೆವರ ಅಪಾರ ಶಿಷ್ಯವರ್ಗದವರಲ್ಲಿ ಒಬ್ಬರಾದ ಇವರು ಶ್ರೀಗಳೆಂದರೆ ಅವರಿಗೆ ಪಂಚಪ್ರಾಣ. ಅವರ ತತ್ವ ಸಿದ್ದಾಂತ ದಾರಿ ದೀಪದ ಮೆರೆಗೆ ಜೀವನದುದ್ದಕ್ಕೂ ಆಂಧ್ರಪ್ರದೇಶ (ಈಗಿನ ತೆಲಂಗಾಣ) ರಾಜ್ಯ ತೊರೆದು ಭಾಲ್ಕಿ ಮಠದಲ್ಲಿ ಅಧ್ಯಯನ ಮಾಡಿ ಕಮಲನಗರದಲ್ಲಿ ಬಾಳಿ ಬದುಕಿದವರು. ಇವರು ತೆಲಂಗಾಣದಲ್ಲಿ ಹುಟ್ಟಿರುವುದರಿಂದ ಇವರಿಗೆ ತೆಲುಗು, ಕನ್ನಡ, ಮರಾಠಿ, ಉರ್ದು,ಮೋಡಿ,ಹಿಂದಿ ಭಾಷೆಗಳ ಪರಿಜ್ಞಾನ ಹೊಂದಿದ್ದರು. ಮತ್ತು ಕನ್ನಡ ಮಾತೃಭಾಷೆಯಾಗಿದ್ದು ಆ ಭಾಷೆಯ ಶರಣ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೨೦೦೧ರಲ್ಲಿ `ಬಸವ ಹೃದಯಿ ಚನ್ನಬಸವ' ಎಂಬ ಪೂಜ್ಯ. ಶ್ರೀ. ಚನ್ನಬಸವ ಪಟ್ಟದ್ದೆವರ ಜೀವನ ಚರಿತ್ರೆ, ೨೦೦೯ರಲ್ಲಿ `ಶಾಂತಿ ವರ್ಧಕ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿ.’ ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಆದರ್ಶ ಉತ್ತಮ ಶಿಕ್ಷಕ ಪ್ರಶಸ್ತಿ, ಭಾಲ್ಕಿ ಮಠದ ಪ್ರಶಸ್ತಿಗಳು ಲಭಿಸಿವೆ. ಇವರು ದಿನಾಂಕ ೨೧-೧೦-೨೦೧೯ರಂದು ಇಹಲೋಕ ತೇಜಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ