ಪುಟಗಳು

ಶನಿವಾರ, ಜನವರಿ 11, 2025

ಬಸವರಾಜ ಸ್ವಾಮಿ

ಕರ್ನಾಟಕ-ಮಹಾರಾಷ್ಟ್ರ ಗಡಿನಾಡಿನ ಮರಾಠಿ ಭಾಷಿಕರ ನಡುವೆ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಸಾಹಿತಿಯೆಂದರೆ ಬಸವರಾಜ ಸ್ವಾಮಿ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಸಂತಪೂರ ಗ್ರಾಮದ ಶಿವಮೋರ್ತೆಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧೦-೧೨-೧೯೫೫ ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಬಿ.ಎಡ್ ಶಿಕ್ಷಕರ ಪ್ರಶಿಕ್ಷಣ ತರಬೇತಿಯನ್ನು ಉತ್ತರ ಪ್ರದೇಶದ ಕಾನಪೂರದಲ್ಲಿ ಅಧ್ಯಯನ ಮಾಡಿ ಬಂದಿದ್ದಾರೆ. ಬದುಕಿಗಾಗಿ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಂತಪೂರದ `ಜನತಾ ಪ್ರವೀಣ ಪದವಿ ಪೂರ್ವ ಕಾಲೇಜಿನಲ್ಲಿ ೧೯೯೨ ರಿಂದ ೨೦೧೫ ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ೨೦೧೪ರಲ್ಲಿ `ಬೆಂಗಳೂರೆAಬ ಮಾಯಾ ನಗರಿ ಮತ್ತು ಇತರ ಕಾವ್ಯಗಳು’ ಎಂಬ ಕವನಸಂಕಲನ ಪ್ರಕಟಿಸಿ, ಜಾನಪದ ಕ್ಷೇತ್ರದಲ್ಲಿ ದೊಡ್ಡಾಟ, ಬಯಲಾಟಗಳ ಹವ್ಯಾಸಿ ರಂಗಭೂಮಿ ಕಲಾವಿದರಾಗಿ, ನಾಟಕÀ ನಿರ್ದೇಶಕರಾಗಿ `ದಲಿತ ಕಳ್ಳ' `ಗೌರಿ ಗೆದ್ದಳು' `ಸಂಗಮ' ಎಂಬ ಸಾಮಾಜಿಕ ನಾಟಕಗಳಲ್ಲಿ ಖಳನಾಯಕ, ಪೊಷಕ ನಟನಾಗಿ, ನಟಿಸಿ ಕಲಾವಿದರಾಗಿಯೂ ಗುರುತಿಸಿ ಕೊಂಡಿದ್ದಾರೆ. ಇವರ ಕವನ ಸಂಕಲನದಲ್ಲಿ ಬುದ್ದ ಬಸವ,ಅಂಬೇಡ್ಕರ್ ಮತ್ತು ನಾವದಗಿ ರೇವಪ್ಪಯ್ಯ ಮುತ್ಯಾನವರ ಕುರಿತಾದ ೫೦ ಕವನಗಳು ಬರೆದಿದ್ದಾರೆ. ಅಷ್ಟೇಯಲ್ಲದೆ ಭಜನೆ ಗೀತೆಗಳು ಕೂಡ ಬರೆದು ಹಾಡುವ ಸಂಗೀತಗಾರರು ಇವರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ