ಶನಿವಾರ, ಜನವರಿ 11, 2025
ಸಿದ್ರಾಮಪ್ಪಾ ಮಾಸಿಮಾಡೆ
ಸಾಹಿತಿ ಹಾಗೂ ಕನ್ನಡ ಸಂಘಟಕರಾದ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಹೆಡಗಾಪೂರ ಗ್ರಾಮದ ವಿಶ್ವನಾಥ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೧೪-೧೨-೧೯೬೦ರಲ್ಲಿ ಬೀದರದ ಬಿ.ವಿ.ಬಿ.ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿ ೩೧ಮೇ ೨೦೨೦ ರಂದು ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಕನ್ನಡಪರ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿ, ೨೦೦೧-೦೪, ೨೦೦೮-೧೨, ೨೦೧೨-೧೫ರ ಮೂರು ಅವಧಿಗೆ ಬೀದರ ಜಿಲಾ ಕಸಾಪ ಅಧ್ಯಕ್ಷರಾಗಿ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳು ಮಾಡಿ ಕೆಲ ಪುಸ್ತಕಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಬೀದರ ಜಿಲ್ಲಾ ಕಥಾಸಂಕಲನ, ಹೀಗಿದೆ ನಮ್ಮ ಬೀದರ, ಬಾಳಬುತ್ತಿ, ಸಿಡಿಲು, ಪ್ರಬಂಧ ಲೋಕ, ವಿಜ್ಞಾನ ಕಿರಣ, ಹೊನ್ನುಡಿ, ವಸುಂಧರೆ, ಕೂಕ್ಕೆನ ಹೂ , ಭಾಲ್ಕಿ ಸಾಹಿತ್ಯ ಸಂಭ್ರಮ, ಶೃಂಗ, ವಚನ ಸುಧೆ, ಚಂದವೆಟ್ಟಾ, ಅಮರವಾಡಿ, ಸಾಹಿತ್ಯ ಸಂಜೀವಿನಿ, ಸಂಪ್ರೀತಿ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರ `ವಚನ ಸುಧೆ ’ ಎಂಬ ಕೃತಿಯು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಮುದ್ರಣವಾಗಿದೆ. ಮತ್ತು ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದಾಗ ೧೪ ವಿವಿಧ ಕೃತಿಗಳು ಪ್ರಕಟಿಸಿ ೭ ಜಿಲ್ಲಾ ೨ ಮಹಿಳಾ ೧೫,ತಾಲೂಕು ೧೪ ವಲಯ ೭.ಗಡಿನಾಡು ೪ ಗ್ರಾಮ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ೨೩ ದತ್ತಿ ೨೦೦ ಪ್ರತಿಭಾ ಪರಿಚಯ ೭೫ ಬೇಂದ್ರೆ ಸ್ಮರಣೋತ್ಸವ ೧೩ ಜಿಲ್ಲಾ ಕವಿಗೊಷ್ಠಿಗಳು ನಡೆಸಿ, ಸಂಶೋಧನಾ ಕಮ್ಮಟವು ಮಾಡಿದ್ದಾರೆ. ಮತ್ತು ೨೦೦೪ ರಿಂದ ೨೦೦೮ ರವರೆಗೆ ನೃಪತುಂಗ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಕಾರ್ಯಸಾಧನೆಗೆ ಬೆಂಗಳೂರಿನ ಬೇಂದ್ರೆ ಕಾವ್ಯಕೂಟದಿಂದ `ದ.ರಾ.ಬೇಂದ್ರೆ ಪ್ರಶಸ್ತಿ’ ಬೀದರ ಜಿಲ್ಲಾಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿ’ ಚಿಂಚೋಳಿಯ ಹಾರಕೂಡ ಚನ್ನಬಸವ ಶಿವಾಚಾರ್ಯ ಸೇವಾ ಸಮಿತಿಯಿಂದ `ಶ್ರೀ ಚೆನ್ನರತ್ನ ಪ್ರಶಸ್ತಿ’ ಬೆಂಗಳೂರು ಕುವೆಂಪು ಕಲಾನಿಕೇತನದಿಂದ `ಕುವೆಂಪು ಕನ್ನಡ ಸಾಹಿತ್ಯ ರತ್ನ’ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕುರಿತು ಡಾ.ರಾಮಚಂದ್ರ ಗಣಾಪೂರ ಮತ್ತು ಡಾ.ಜಗದೇವಿ ತಿಬಶೆಟ್ಟಿಯವರು `ಸೌಮ್ಯ ಸಿರಿ’ ಎಂಬ ಅಭಿನಂದನಾ ಗ್ರಂಥವು ಹೊರ ತಂದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ