ಭಾನುವಾರ, ಜನವರಿ 12, 2025
ಸುಮನ್ ಹೆಬ್ಬಾಳಕರ್
ಕವಯತ್ರಿ ಸುಮನ್ ಹೆಬ್ಬಾಳಕರ್. ಇವರು ಬೀದರದ ಚಂದ್ರಪ್ಪ ಹೆಬ್ಬಾಳಕರ್ ಮತ್ತು ಶಕುಂತಲಾ ದಂಪತಿಗಳಿಗೆ ದಿನಾಂಕ ೨೪-೧೧-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್.ಸ್ನಾತಕೋತ್ತರ ಪದವಿಧರರಾದ ಇವರು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಬೀದರದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಚಂದ್ರಪ್ಪ ಹೆಬ್ಬಾಳಕರ್ ಸಾಹಿತಿಗಳಾಗಿದ್ದರಿಂದ ಅವರ ಪ್ರಭಾವದಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು `ಪ್ರೀತಿ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಕಾವ್ಯ ನಿನಾದ' ಎಂಬ ಇವರ ಇನ್ನೊಂದು ಕೃತಿಯು ಪ್ರಕಟಣೆಯ ಹಂತದಲ್ಲಿದೆ. ಕಾವ್ಯ ಸಾಹಿತ್ಯದಲ್ಲಿ ಗುರ್ತಿಸಿಕೊಂಡ ಇವರಿಗೆ ೨೦೦೮ರಲ್ಲಿ ಸುವರ್ಣ ಸಂಭ್ರಮದ ಕನ್ನಡ ರತ್ನ ಪ್ರಶಸ್ತಿ, ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ೨೦೦೯ರಲ್ಲಿ ಲೋಹಿಯಾ ಪ್ರತಿಷ್ಠಾನದ ಕಲ್ಯಾಣ ರತ್ನ ಪ್ರಶಸ್ತಿ, ಮತ್ತು ೨೦೧೪ರಲ್ಲಿ ಆದರ್ಶಿ ಉಪನ್ಯಾಸಕಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೨೦೧೨ರಲ್ಲಿ ನಡೆದ ಹೈದರಾಬಾದ ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ, ಮತ್ತು ವಚನ ಸಾಹಿತ್ಯ ಸಮ್ಮೇಳನ ಸೋಲಾಪೂರದಲ್ಲಿ, ಹಾಗೂ ಅಖಿಲ ಭಾರತ ದ್ವಿತೀಯ ದಲಿತ ಸಾಹಿತ್ಯ ಸಮ್ಮೇಳನ ಬೀದರದಲ್ಲಿ ಪಾಲ್ಗೊಂಡು ಆ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿ ಸನ್ಮಾನಿತರಾಗಿದ್ದಾರೆ. ಇವರ ಬರಹಗಳು ಹಲವಾರು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ