ಪುಟಗಳು

ಶುಕ್ರವಾರ, ಜನವರಿ 10, 2025

ಚಂದ್ರಪ್ಪ ಹೆಬ್ಬಾಳಕರ್

ಹಿರಿಯ ಸಾಹಿತಿ
ಚಂದ್ರಪ್ಪ ಹೆಬ್ಬಾಳಕರ್ ಅವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇಮಳಖೇಡ ಗ್ರಾಮದ ಅಡಿವೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೧೪-೪-೧೯೪೦ರಲ್ಲಿ ಜನಿಸಿದ್ದಾರೆ. ಇವರು ಬಿ.ಎ.ಬಿ.ಎಡ್.ಪದವಿ ಪಡೆದು ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷರಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು `ಪ್ರೀತಿ' (ಕವನ ಸಂಕಲನ) `ಸತ್ಯ ಕಥಾನಕಗಳು' (ಕಥಾಸಂಕಲನ) `ಚಿಂತನ ಲಹರಿ', `ಚಿಂತನಾ ಚಂದ್ರಿಕೆ' (ಚಿಂತನೆ) `ಜೀವನ ಮೌಲ್ಯ ದೀಪಿಕೆ'. `ಬೀದರ ತಾಲೂಕು ದರ್ಶನ', `ಬೀದರ ಜಿಲ್ಲೆಯ ಮೊಹರಂ ಪದಗಳು', `ಜಾನಪದದಲ್ಲಿ ಕಳ್ಳು ಬಳ್ಳಿಯ ಸಂಬAಧಗಳು', `ಬೀದರ ಜಿಲ್ಲೆಯ ಜಾನಪದ ಸೊಗಡು', `ಗೆಳೆತನ' `ಉರಿಲಿಂಗ ಪೆದ್ದಿ ಪರಂಪರೆ', `ದಲಿತೋದ್ದಾರಕರು', `ಉರಿಲಿಂಗದೇವ ಉರಿಲಿಂಗಪೆದ್ದಿ ಕಾಳವ್ವೆಯ ವಚನ ಸಂಪದ', `ಚಂದ್ರಣ್ಣನ ವಚನಗಳು', :`ಚಿಂತನ ಮಂಥನ', `ವೃದ್ದರ ವೇದನಾಗಳು', `ಭೀಮಕವಿ ಶ್ರೀ ಮಾಣಿಕರಾವ ಜ್ಯೋತಿ' (ಚರಿತ್ರೆ) `ಶೇರ್-ಎ-ದಖ್ಖನ-ಬಿ.ಶ್ಯಾಮಸುಂದರ', `ಬೀದರ ಜಿಲ್ಲೆಯ ದಲಿತ ಕವಿ- ಕಾವ್ಯ ಒಂದು ಅವಲೋಕನ.' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ `ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಶಿಕ್ಷಣ ಸಿರಿ ಪ್ರಶಸ್ತಿ. ಸಂಸ್ಕಾರ ಪ್ರಶಸ್ತಿ, ಜನಪದ ಜಟ್ಟಿ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರಿಗೆ ಬೀದರ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೧೩ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ಬೀದರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ, ಇಂಗ್ಲಿಷ್ ಭಾಷಾ ವಿಷಯ ಪರಿವೀಕ್ಷಕರಾಗಿ ಹಾಗೂ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು ಸದ್ಯ ೮೦ರ ಇಳಿವಯಸ್ಸಿನಲ್ಲೂ `ಬೀದರ ಜಿಲ್ಲಾ ಧರಿನಾಡು ಕನ್ನಡ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ