ಶುಕ್ರವಾರ, ಜನವರಿ 10, 2025
ಬಿ.ಎಸ್. ಸೈನಿರ್
ಸಾಹಿತಿ ಬಿ.ಎಸ್.ಸೈನಿರ್. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶ್ರೀ ಶರಣಪ್ಪ ಮತ್ತು ಶ್ರೀಮತಿ ಗುರಮ್ಮ ದಂಪತಿಗಳಿಗೆ ೧೯೪೨ರಲ್ಲಿ ಜನಿಸಿದ್ದಾರೆ. ಬಿ.ಎ. ಎಲ್.ಎಲ್.ಬಿ ಮತ್ತು ಎಂ.ಎ ಪದವೀಧರರಾದ ಇವರು ೧೯೬೩ರಲ್ಲಿ ಹುಮನಾಬಾದ ತಾಲೂಕಿನ ಮನ್ನಾಐಖೇಳಿ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿದರು. ಮತ್ತು ಕೆಲಕಾಲ ಸಮೀಪದ ಬಗದಲ್ ಪ್ರೌಢಶಾಲೆಯಲ್ಲಿಯು ಸೇವೆ ಸಲ್ಲಿಸಿದರು. ಅದಾದ ನಂತರ ಔರಾದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಮತ್ತೆ ಮರಳಿ ಮನ್ನಾಐಖೇಳಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆಯಲ್ಲಿ ಮುಂದುವರೆಯುತ್ತಿರುವಾಗ ದಿನಾಂಕ ೧೮-೬-೧೯೯೧ರಲ್ಲಿ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದ್ದಾರೆ. ಇವರನ್ನು ಬೀದರ ಜಿಲ್ಲೆಯ ಮೊದಲ ನವ್ಯೋದಯ ಕವಿಯೆಂದು ಹೆಸರುವಾಸಿಯಾಗಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಗೀಳು ಬೆಳೆಸಿಕೊಂಡ ಇವರು ೧೯೭೩ರಲ್ಲಿ `ಬೆಳಗಾಗುತ್ತಿದೆ' (ಕವನ ಸಂಕಲನ) `ಹೇಮಲತಾ' (ನಾಟಕ) ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಲಭೀಸಿವೆ, ಮತ್ತು ಬೀದರ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ