ಸಾಹಿತಿ ಕಂಟೆಪ್ಪ ಟಿ. ರವರು ಬೀದರ ತಾಲೂಕಿನ ತಳಗಟ್ಟ ಗ್ರಾಮದ ಸೈದಪ್ಪಾ ಮತ್ತು ನರಸವ್ವ ದಂಪತಿಗಳಿಗೆ ದಿನಾಂಕ ೧೩-೭-೧೯೪೨ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ೨೦೦೧ರಲ್ಲಿ ನಿವೃತ್ತರಾಗಿದ್ದಾರೆ. ಇವರು `ನಾ ಕಂಡ ಬುದ್ಧ ಮತ್ತು ದಮ್ಮ’ ಎಂಬ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಮತ್ತು ಇನ್ನೂ ಕೆಲ ಬರಹಗಳು ಬರೆದಿದ್ದು, ಅವು ಅಪ್ರಕಟಿತವಾಗಿವೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ