ಪುಟಗಳು

ಶನಿವಾರ, ಜನವರಿ 11, 2025

ಬಾಬುರಾವ ಜಾಧವ

ಸಾಹಿತಿ ಬಾಬುರಾವ ಜಾಧವ ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಡೊಣಗಾಪೂರ ಗ್ರಾಮದ ಮರೆಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨-೨-೧೯೪೭ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಸಮಾಜ ಸೇವಕರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು `ಧರ್ಮ ಜ್ಯೋತಿ, ಜನ ಜಾಗೃತಿ' ಎಂಬ ಕವನ ಸಂಕಲನಗಳು ಮತ್ತು `ಮಹಾ ಮಾನವ ಬುದ್ಧ ಚರಿತ್ರೆ' ಎಂಬ ಕೃತಿಗಳು ರಚಿಸಿದ್ದಾರೆ. ಇವರು ಉತ್ತಮ ಸಂಗೀತ ಕಲಾವಿದ ಹಾಗೂ ಗಾಯಕರಾಗಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ