ಪುಟಗಳು

ಶನಿವಾರ, ಜನವರಿ 11, 2025

ಶರಣಯ್ಯಾ ವಿ.ಮಠಪತಿ

ಹಿರಿಯ ಸಾಹಿತಿ ಶರಣಯ್ಯಾ ವಿ. ಮಠಪತಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯಲದಗುಂಡಿ ಗ್ರಾಮದ ವಿಶ್ವನಾಥಯ್ಯಾ ಮತ್ತು ಸೋನಾಬಾಯಿ ದಂಪತಿಗಳಿಗೆ ದಿನಾಂಕ ೧೨-೧೦-೧೯೪೭ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ೧೯೭೨ರಲ್ಲಿ ಭಾಲ್ಕಿಯ ಸತ್ಯನೀಕೇತನ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆಗೆ ಸೇರಿ ೧೯೮೬ರಲ್ಲಿ ಬಡ್ತಿ ಹೊಂದಿ ಸತ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೦೫ರಲ್ಲಿ ನಿವೃತ್ತರಾಗಿದ್ದಾರೆ. ಇವರು `ಪಡೆದ ಭೂಮಿ' ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಮತ್ತು 'ಪಶ್ಚಾತ್ತಾಪ' ಎಂಬ ಕಿರುನಾಟಕ, 'ಆಧುನಿಕ ವಚನಗಳು', 'ಭಾಲ್ಕಿ ದೇವಾಲಯಗಳು' ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು 'ಓಂ ಭಕ್ತಿ ಗುಡ್ಡದ ಯಲದಗುಂಡಿ ಪರಮೇಶ್ವರಾ ! ' ಎಂಬ ವಚನಾಂಕಿತದಿAದ ಆಧುನಿಕ ವಚನಗಳನ್ನು ಬರೆದಿದ್ದಾರೆ. ೨೦೦೨ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೊಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಮತ್ತು ೧೯೭೫ರಲ್ಲಿ ಬೆಂಗಳೂರು ಕಸಾಪ ಬರಹಗಾರರ ಕಮ್ಮಟದಲ್ಲಿ ಪಾಲ್ಗೊಂಡಿದ್ದರು. ಇವರಿಗೆ ೨೦೧೨ರಲ್ಲಿ ಬಸವಕಲ್ಯಾಣ ತಾಲೂಕಿನ ಯಲದಗುಂಡಿಯಲ್ಲಿ ನಡೆದ ಕೊಹಿನೂರು ವಲಯ ಮಟ್ಟದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ