ಶನಿವಾರ, ಜನವರಿ 11, 2025
ಯಶೋದಮ್ಮ ಸಿದ್ದಬಟ್ಟೆ
ಕಾದಂಬರಿಗಾರ್ತಿ ಯಶೋದಮ್ಮ ಸಿದ್ದಬಟ್ಟೆಯವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಜೈಪುರ ಗ್ರಾಮದ ಶಿವಪ್ಪ ಎಡ್ಕೆ ಮತ್ತು ಶಾರದಮ್ಮ ದಂಪತಿಗಳಿಗೆ ದಿನಾಂಕ ೮-೬-೧೯೪೩ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿ ಪಡೆದು ಶಿಕ್ಷಕಿಯಾದ ಇವರು ಬೀದರ ಜಿಲ್ಲೆ ಔರಾದನ ಸಾಹಿತಿ ಬಿ.ಜಿ.ಸಿದ್ದಬಟ್ಟೆಯವರ ಧರ್ಮ ಪತ್ನಿಯಾಗಿದ್ದು ಕವಯತ್ರಿ ಕಾವ್ಯಶ್ರೀ ಮಹಾಗಾಂವಕರ್ ಅವರ ತಾಯಿಯಾಗಿ ಚಿರಪರಿಚಿತರಾದ ಇವರು ದಿನಾಂಕ ೧೭-೩-೨೦೦೮ರಲ್ಲಿ ಇಹಲೋಕ ತ್ಯೆಜಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಕಾದಂಬರಿಕಾರರಾಗಿ ಗುರುತಿಸಿಕೊಂಡು `ಮಂಗಳಾ', `ವಿಶ್ವಮೇಘ' 'ಹೊಸಹೆಜ್ಜೆ' (ಕಾದಂಬರಿಗಳು) `ಬೀದರ ಜಿಲ್ಲೆಯ ಮಹಿಳಾ ಸಾಹಿತಿಗಳು' (ಲೇಖನ ಸಂಕಲನ) `ಸಾಹಿತ್ಯ ಸೌರಭ', `ಚೈತನ್ಯ ಶ್ರೀ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಶಿಕ್ಷಣ ಕ್ಷೇತ್ರದಲ್ಲಿ ೧೯೭೦ ರಿಂದ ೨೦೦೮ರವರೆಗೆ ಕಾರ್ಯನಿರ್ವಹಿಸಿ ಸಾಹಿತ್ಯಿಕ ಮತ್ತು ಸಾಮಾಜಿಕವಾಗಿಯು ಸೇವೆ ಸಲ್ಲಿಸಿದ್ದಾರೆ. ಮತ್ತು ಶಿಕ್ಷಕರಾಗಿ ಮಾಡಿದ ಶೈಕ್ಷಣಿಕ ಸೇವೆಗೆ ಅತ್ಯುನ್ನತವಾದ `ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ' ಯು ಲಭಿಸಿದೆ. ಇದು ಬೀದರ ಜಿಲ್ಲೆಗೆ ಪ್ರಥಮ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕಿಯೆಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಆದ್ದರಿಂದ ಇವರಿಗೆ ೨೦೦೩ರಲ್ಲಿ ಬಸವಕಲ್ಯಾಣದ ಹಾರಕೂಡದಲ್ಲಿ ನಡೆದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಮಾಡಿ ಗೌರವಿಸಲಾಗಿದೆ. ಇವರು ಉತ್ತಮ ವಾಗ್ಮಿಗಳು, ಸಂಘಟನಾಕಾರರು ಆಗಿದ್ದರಿಂದ ಕರ್ನಾಟಕÀ ಲೇಖಕಿಯರ ಸಂಘದ ಸಂಸ್ಥಾಪಕರಾಗಿ, ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲ ಸಾಹಿತ್ಯಿಕ ಕಾರ್ಯಕ್ರಮಗಳು ಮಾಡಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಆಕಾಸವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ