ಶುಕ್ರವಾರ, ಜನವರಿ 10, 2025
ಮಂಗಲಾ ವಿ.ಕಪ್ಪರೆ
ಸಾಹಿತಿ ಹಾಗೂ ಕಲಾವಿದೆಯಾದ ಮಂಗಲಾ ವಿ.ಕಪ್ಪರೆಯವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಗುರಯ್ಯ ಸ್ವಾಮಿ ಮಾಸ್ತರ್ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨-೩-೧೯೬೩ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ೧೯೯೫ರಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿ ಬೀದರದ ಜ್ಞಾನ ಗಂಗಾ ಹಿರಿಯ ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಸದ್ಯ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಸುಪ್ರಭಾತ’, `ಮಧುರ ಮಿಲನ’, `ಜೇಸುದಾಸನ ಕಿಂಡಿ’, `ಅಂಬರದ ಆಚೆ’.(ಕವನ ಸಂಕಲನಗಳು) `ಹುಚ್ಚಂಬಿ ಮತ್ತು ಇತರ ಕತೆಗಳು’ (ಕಥಾ ಸಂಕಲನ) `ತೂಗೂಯ್ಯಾಲೆ’ (ಕಾದಂಬರಿ) `ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ ಚರಿತ್ರೆ,’ `ಮಾಣಿಕ್ಯ ಜ್ಯೋತಿ’ (ಚರಿತ್ರೆಗಳು) `ಕಾವ್ಯ ಗುಚ್ಛ' (ಸಂಪಾದನೆ) `ಚನ್ನ ಬಸವ ಪಟ್ಟದೇವರು' (ಹಿಂದಿಗೆ ಅನುವಾದ) `ಶಾಹಿನ್ ಕೆ ಸರ್ ತಾಜ್’, `ಮೇರಾ ಗಾಂವ ಮೇರಾ ಜೀವಾಳ್’, `ಚಿಡಿಯಾಕಾ ಘೋಸಲಾ' ಎಂಬ ಈ ಕೃತಿಗಳು ಹಿಂದಿಯಲ್ಲಿ ಬರೆದು ದ್ವಿಭಾಷಾ ಕವಯತ್ರಿಯಾಗಿ ಗುರ್ತಿಸಿಕೊಂಡಿದ್ದಾರೆ. ಮತ್ತು ಕೆಲ ಹಾಡುಗಳು ಸಿ.ಡಿ.ರೂಪದಲ್ಲಿ ಮುದ್ರಿಸಿರುವ ಇವರು ಕೆಲ ಧಾರವಾಹಿ ಚಲನ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಮೇಘಾಲಯದ ಶಿಲಾಂಗನಲ್ಲಿ ನಡೆದ ಸಮ್ಮೇಳನದಲ್ಲಿ ಅಲ್ಲಿನ ರಾಜ್ಯ ಪಾಲರಿಂದ ಗೌರವ ಸನ್ಮಾನ, ಚಂಡಿಗಡದಲ್ಲಿ ನಡೆದ ಸಮ್ಮೇಳನದಲ್ಲಿ ಇವರ ಕೃತಿ ಬಿಡುಗಡೆಯಾಗಿ ವಿಶೇಷ ಸನ್ಮಾನ, ನೇಪಾಳ ದೇಶದಲ್ಲಿ ನಡೆದ ಸಮ್ಮೇಳನದಲ್ಲಿ ಹಿಂದಿ ಕವನ ವಾಚಿಸಿದ್ದರಿಂದ ಅಲ್ಲಿನ ರಾಷ್ಟ್ರಪತಿಗಳು ಗೌರವ ಸನ್ಮಾನ ಮಾಡಿ `ಮಿಸ್ ನೇಪಾಳ' ಎಂಬ ಪ್ರಶಸ್ತಿಯು ನೀಡಿದ್ದಾರೆ. ಕಲಬುರಗಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, ಸಂತ ಮೀರಾಬಾಯಿ ಪ್ರಶಸ್ತಿ, `ಸರೋಜಿನಿ ನಾಯ್ಡು ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ, ಮೊದಲಾದ ಪ್ರಶಸ್ತಿಗಳು ಪಡೆದ ಇವರು ಸದ್ಯ ಕಲಬುರಗಿಯ ನಿವಾಸಿಯಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ