ಪುಟಗಳು

ಶುಕ್ರವಾರ, ಜನವರಿ 10, 2025

ದಿ. ಮ.ಮಾ.ಬೊರಾಳಕರ್

ಸಾಹಿತಿ ದಿ.ಮ.ಮಾ.ಬೊರಾಳಕರ್ ರವರ ಪೂರ್ಣನಾಮ ಮಲ್ಲಿಕಾರ್ಜುನ ಮಾಣಿಕಪ್ಪಾ ಬೊರಾಳಕರ್ ಎಂದಾಗಿದೆ. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿರ್ಣಾವಾಡಿ ಗ್ರಾಮದ ಮಾಣಿಕಪ್ಪಾ ಮತ್ತು ಸುಶೀಲಮ್ಮಾ ದಂಪತಿಗಳಿಗೆ ದಿನಾಂಕ ೧೨-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್ ಪದವಿಧರರಾದ ಇವರು ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಇವರು ೧೯೯೦ರಲ್ಲಿ `ಚಿಗುರು’ ೧೯೯೨ರಲ್ಲಿ `ಕನ್ನಡಿಗನ ಹಾಡು’, `ಸವಿನೆನಪಿನ ಹಂದರ’ (ಕವನಸಂಕಲನಗಳು) `ವಿಶ್ವ ಪ್ರಸಿದ್ಧ ಬಿದರಿ ಕಲೆ’ (ಸಂಶೋಧನೆ) `ಎರಡು ಬಳ್ಳಿ ಹೂ ಹಲವು’, `ಬೀದರ ಜಿಲ್ಲೆಯ ಆಣಿ ಪಿಣಿ ಹಾಡುಗಳು’ (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೧೯೯೬ರಲ್ಲಿ ಕರ್ನಾಟಕ ಸರ್ಕಾರದ ನೆಹರು ಯುವ ಕೇಂದ್ರದ ಬೆಂಗಳೂರಿನಿAದ `ರಾಜ್ಯ ಯುವ ಪ್ರಶಸ್ತಿ, ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಆದರೆ ದುರದೃಷ್ಟ ಇವರು ೮-೨-೨೦೦೩ರಲ್ಲಿ ಅಕಾಲಿಕ ಸಾವನ್ನಪ್ಪಿದರಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರು ಬರೆದ ನೂರಾರು ಅಪ್ರಕಟಿತ ಬರಹಗಳು ಪುಸ್ತಕ ರೂಪದಲ್ಲಿ ಹೊರತರಲು ಅವರ ಧರ್ಮ ಪತ್ನಿ ಮೀನಾಕುಮಾರಿ ಬೊರಾಳಕರ್ ರವರು ಶ್ರಮಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ