ಪುಟಗಳು

ಶನಿವಾರ, ಜನವರಿ 11, 2025

ವಿಠಲರಾವ ಯೋಗಿ

ವಚನ ಮತ್ತು ತತ್ವಪದಗಳನ್ನು ಬರೆದ ದಲಿತ ಸಾಹಿತಿಯೆಂದರೆ ವಿಠಲರಾವ ಯೋಗಿ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಲಾದಾ ಗ್ರಾಮದ ಶ್ರೀ ಹೊನ್ನಪ್ಪ ಮತ್ತು ಶ್ರೀಮತಿ ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೧-೩-೧೯೪೮ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ, ಟಿ.ಸಿ.ಎಚ್.ವರೆಗೆ ಶಿಕ್ಷಣ ಪಡೆದ ಇವರು ೧೯೭೫ರಲ್ಲಿ ಔರಾದ ತಾಲೂಕಿನ ಬೀರಿ (ಬಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ನಂತರ ಎಕಲಾರ ಗ್ರಾಮದ ಸಂಯುಕ್ತ ಪ್ರೌಢ ಶಾಲೆಯಲ್ಲಿ ೯ವರ್ಷ ಸೇವೆ ಸಲ್ಲಿಸಿ, ದೋಧನ ಗ್ರಾಮದ ಮುಖ್ಯಗುರುಗಳಾಗಿ ಬಡ್ತಿ ಹೊಂದಿ, ಸಂತಪೂರದ ಶಿಕ್ಷಣ ಸಂಯೋಜಕರಾಗಿ ೨೦೦೬ರಲ್ಲಿ ದೋಧನಾ ಗ್ರಾಮದ ಶಾಲೆಯಿಂದ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿದ್ದರಿಂದ ಅಧ್ಯಾತ್ಮಿಕ ದೃಷ್ಟಿಕೋನದಿಂದ ಕೆಲ ತತ್ವಪದ, ವಚನಗಳು ಬರೆದು ನಿವೃತ್ತಿಯ ನಂತರ ೨೦೧೪ರಲ್ಲಿ `ಯೋಗೇಶ್ವರ ವಚನಗಳು' ಎಂಬ ಆಧುನಿಕ ವಚನ ಸಂಕಲನವು ಪ್ರಕಟಿಸಿದ್ದಾರೆ. ಮತ್ತು ೨೦೦೦ಇಸ್ವಿಯಲ್ಲಿ ಇವರಿಗೆ ಜಿಲ್ಲಾ ಮಟ್ಟದ `ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯೊಂದಿಗೆ ಮೂರು ಸಾವಿರ ಗೌರವಧನವು ಪಡೆದಿದ್ದು, ಇವರು ನೂರಾರು ತತ್ವಪದ ಆಧುನಿಕ ವಚನಗಳು ಬರೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ